masthmagaa.com:
ಬಿಹಾರದಲ್ಲಿ ಮೈತ್ರಿ ಪಕ್ಷವಾದ ಜೆಡಿಯುಗೆ ಬಿಜೆಪಿ ವಾರ್ನಿಂಗ್ ನೀಡಿದೆ. ನಿಮ್ಮ ಲಿಮಿಟ್ಸ್ನಲ್ಲಿ ನೀವಿರಿ.. ಇಲ್ಲವಾದ್ರೆ ಬಿಹಾರದ 76 ಲಕ್ಷ ಬಿಜೆಪಿ ಕಾರ್ಯಕರ್ತರು ನಿಮಗೆ ಬುದ್ಧಿ ಕಲಿಸ್ತಾರೆ ಅಂತ ಬಿಹಾರ ಬಿಜೆಪಿ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಎಚ್ಚರಿಸಿದ್ದಾರೆ. ಈ ಹಿಂದೆ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಲೇಖಕ ದಯಾಪ್ರಕಾಶ್ ಸಿನ್ಹಾ ಸಾಮ್ರಾಟ ಅಶೋಕನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರು. ಹೀಗಾಗಿ ಜೆಡಿಯು ನಾಯಕರು, ಕೇಂದ್ರ ಸರ್ಕಾರ ಸಿನ್ಹಾಗೆ ನೀಡಿರೋ ಪದ್ಮಶ್ರೀ ಪ್ರಶಸ್ತಿ ವಾಪಸ್ ಪಡೆಯಬೇಕು ಅಂತ ಒತ್ತಾಯಿಸಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರೋ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್, ಸಿನ್ಹಾ ವಿರುದ್ಧ ಎಫ್ಐಆರ್ ಆಗಿದೆ. ಅವರನ್ನು ಅರೆಸ್ಟ್ ಮಾಡೋದುಬಿಟ್ಟು ಹೀಗೆ ಮಾಡೋದು ಸರಿಯಲ್ಲ ಅಂತ ಎಚ್ಚರಿಸಿದ್ದಾರೆ.
-masthmagaa.com
Contact Us for Advertisement