ಸುದೀಪ್‌ ಅಬ್ಬರದ ರೋಡ್‌ ಶೋ ! ಮುಗಿಬಿದ್ದ ಜನಸಾಗರ..

masthmagaa.com:

ಕಿಚ್ಚ ಸುದೀಪ್‌ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಸುದೀಪ್‌ ಅವರು ಹೋದ ಕಡೆ ಎಲ್ಲ ಜನ ಸಾಗರವೇ ಬರುತ್ತಿದೆ. ರಾಜ್ಯಾದ್ಯಾಂತ ತೆರಳಿ ಸುದೀಪ್‌ ಬಿಜೆಪಿ ಅಭ್ಯರ್ತಿಗಳ ಪರ ಪ್ರಚಾರ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಸುದೀಪ್‌ ಬಾಗಲಕೋಟಿಗೆ ಪ್ರಚಾರಕ್ಕೆಂದು ಹೋಗಿದ್ದರು. ಅಲ್ಲಿ ಸುದೀಪ್‌ ಅಬ್ಬರದ ರೋಡ್‌ ಶೋ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಪ್ರಚಾರಕ್ಕಿಳಿದಿದ್ದರು. ರಸ್ತೆ ಉದ್ದಕ್ಕೂ ಕಿಚ್ಚನ ಪರ ಘೋಷಣೆಗಳನ್ನು ಕೂಗಲಾಗಿದೆ. ಇನ್ನೇನು ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಇನ್ನು ಕೆಲವು ದಿನಗಳ ಕಾಲ ಸುದೀಪ್‌ ವಿವಿಧ ಕಡೆಗಳಿಗೆ ತೆರಳಿ ಬಿಜೆಪಿ ಪರ ಚುನಾವಣೆ ಪ್ರಚಾರ ಮಾಡಲಿದ್ದಾರೆ.

-masthmagaa.com

Contact Us for Advertisement

Leave a Reply