ಅಂಬಿ ನೆನೆದು ಭಾವುಕರಾದ ಮಂಡ್ಯ ಸಂಸದೆ ಸುಮಲತ

masthmagaa.com:

ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಮತ್ತು ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರ ನಡುವಿನ ಮಾತಿನ ಸಮರ ಸದ್ಯಕ್ಕೆ ನಿಲ್ಲೋ ಲಕ್ಷಣ ಕಾಣ್ತಿಲ್ಲ. ಜೆಡಿಎಸ್​ ನಾಯಕರು ಅಂಬರೀಷ್ ಹೆಸರು ಬಳಸುತ್ತಿರೋ ಬಗ್ಗೆ ಅಸಮಾಧಾನ ಹೊರಹಾಕಿದ ಸುಮಲತಾ ಇವತ್ತು ಭಾವುಕರಾದ್ರು. ಇನ್ನು ಸುಮಲತಾ ಪರ ಇವತ್ತು ನಿರ್ಮಾಪಕ ರಾಕ್​ಲೈನ್ ವೆಂಕಟೇಶ್​ ಮಾತನಾಡಿದ್ರು. ಇದೇ ವೇಳೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಇನ್ನು ಸುಮಲತಾ ವಿರುದ್ಧ ಜೆಡಿಎಸ್​ ನಾಯಕರ ವಾಗ್ದಾಳಿ ಇವತ್ತು ಕೂಡ ಮುಂದುವರಿದಿತ್ತು. ಮಾಜಿ ಸಂಸದ ಎಲ್​.ಆರ್​. ಶಿವರಾಮೇಗೌಡ ಮಾತನಾಡಿ, ಮಂಡ್ಯ ಜಿಲ್ಲೆಗೆ ಅಂಬರೀಶ್​ ಏನೂ ಮಾಡಿಲ್ಲ. ಆಕಸ್ಮಿಕವಾಗಿ ಸುಮಲತಾ ಮಂಡ್ಯ ಸಂಸದೆ ಆಗಿದ್ದಾರೆ. ಮಂಡ್ಯದಲ್ಲಿ ನಟಿ ರಮ್ಯಾಗೆ ಆದ ಸ್ಥಿತಿ ಸುಮಲತಾಗೂ ಆಗುತ್ತೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply