masthmagaa.com:
ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಬಾರಿ ವಾಗ್ವಾದ ನಡೆದಿದೆ. ಇವತ್ತು ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅಕ್ರಮ ಗಣಿಗಾರಿಕೆಯಿಂದ ಕೆಆರ್ಎಸ್ ಬಿರುಕು ಬಿಟ್ಟಿದೆ ಅಂತ ಸುಮಲತಾ ಹೇಳಿದ್ದಾರೆ. ಮಂಡ್ಯಕ್ಕೆ ಇಂಥಾ ಸಂಸದರು ಈವರೆಗೆ ಬಂದಿಲ್ಲ. ಇನ್ಮುಂದೆನೂ ಬರಲ್ಲ. ಕೆಆರ್ಎಸ್ಗೆ ಇವರನ್ನೇ ಅಡ್ಡಲಾಗಿ ಮಲಗಿಸಿಬಿಡಬೇಕು. ಎಲ್ಲ ಸರಿಯಾಗುತ್ತೆ ಅಂತ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರೋ ಸುಮಲತಾ, ಮಹಿಳೆಯರ ಬಗ್ಗೆ ಹಗುರವಾಗಿ ಮಾತಾಡೋದು ಸರಿಯಲ್ಲ. ಈ ಹಿಂದೆ ಸಿಎಂ ಆಗಿದ್ದವರಿಗೆ ಹೇಗೆ ಮಾತನಾಡಬೇಕೆಂಬ ಕನಿಷ್ಠ ಜ್ಞಾನವೂ ಇಲ್ವಾ ಅಂತ ಪ್ರಶ್ನಿಸಿದ್ದಾರೆ. ಅಲ್ಲದೆ ದೊಡ್ಡ ಹಗರಣ ನಡೀತಿದೆ. ಕೆಆರ್ಎಸ್ ಬಗ್ಗೆ ನಾನು ಕಾಳಜಿ ವಹಿಸಿದ್ರೆ ಇವರಿಗೆ ಯಾಕೆ ತೊಂದ್ರೆ ಅಂತ ಕಿಡಿಕಾರಿದ್ದಾರೆ. ಈ ನಡುವೆ ಪ್ರತಿಕ್ರಿಯಿಸಿರೋ ಕಂದಾಯ ಸಚಿವ ಆರ್.ಅಶೋಕ್, ಕೆಆರ್ಎಸ್ ಡ್ಯಾಂನಲ್ಲಿ ಬಿರುಕು ಇದೆ ಅಂತ ತಪ್ಪು ಮಾಹಿತಿ ರವಾನೆಯಾಗ್ಬಾರ್ದು. ಅದನ್ನ ನೋಡಿಕೊಳ್ಳಲು ತಜ್ಞರು ಮತ್ತು ಕಾವೇರಿ ನೀರಾವರಿ ನಿಗಮ ಇದೆ. ಸುಮಲತಾ ಅವರಾಗಲೀ, ಕುಮಾರಸ್ವಾಮಿ ಅವರಾಗಲೀ ಈ ರೀತಿ ತಪ್ಪು ಸಂದೇಶ ನೀಡಿ, ಲಕ್ಷಾಂತರ ರೈತರ ಜೊತೆ ಆಟವಾಡಬಾರದು ಅಂತ ಹೇಳಿದ್ದಾರೆ.
-masthmagaa.com
Contact Us for Advertisement