ಕುಮಾರಸ್ವಾಮಿ ಸುಮಲತ ಮಾತಿನ ಯುದ್ಧ!

masthmagaa.com:

ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಬಾರಿ ವಾಗ್ವಾದ ನಡೆದಿದೆ. ಇವತ್ತು ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್​ ಬಿರುಕು ಬಿಟ್ಟಿದೆ ಅಂತ ಸುಮಲತಾ ಹೇಳಿದ್ದಾರೆ. ಮಂಡ್ಯಕ್ಕೆ ಇಂಥಾ ಸಂಸದರು ಈವರೆಗೆ ಬಂದಿಲ್ಲ. ಇನ್ಮುಂದೆನೂ ಬರಲ್ಲ. ಕೆಆರ್​ಎಸ್​​ಗೆ ಇವರನ್ನೇ ಅಡ್ಡಲಾಗಿ ಮಲಗಿಸಿಬಿಡಬೇಕು. ಎಲ್ಲ ಸರಿಯಾಗುತ್ತೆ ಅಂತ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರೋ ಸುಮಲತಾ, ಮಹಿಳೆಯರ ಬಗ್ಗೆ ಹಗುರವಾಗಿ ಮಾತಾಡೋದು ಸರಿಯಲ್ಲ. ಈ ಹಿಂದೆ ಸಿಎಂ ಆಗಿದ್ದವರಿಗೆ ಹೇಗೆ ಮಾತನಾಡಬೇಕೆಂಬ ಕನಿಷ್ಠ ಜ್ಞಾನವೂ ಇಲ್ವಾ ಅಂತ ಪ್ರಶ್ನಿಸಿದ್ದಾರೆ. ಅಲ್ಲದೆ ದೊಡ್ಡ ಹಗರಣ ನಡೀತಿದೆ. ಕೆಆರ್​ಎಸ್​ ಬಗ್ಗೆ ನಾನು ಕಾಳಜಿ ವಹಿಸಿದ್ರೆ ಇವರಿಗೆ ಯಾಕೆ ತೊಂದ್ರೆ ಅಂತ ಕಿಡಿಕಾರಿದ್ದಾರೆ. ಈ ನಡುವೆ ಪ್ರತಿಕ್ರಿಯಿಸಿರೋ ಕಂದಾಯ ಸಚಿವ ಆರ್.ಅಶೋಕ್​​, ಕೆಆರ್​ಎಸ್​ ಡ್ಯಾಂನಲ್ಲಿ ಬಿರುಕು ಇದೆ ಅಂತ ತಪ್ಪು ಮಾಹಿತಿ ರವಾನೆಯಾಗ್ಬಾರ್ದು. ಅದನ್ನ ನೋಡಿಕೊಳ್ಳಲು ತಜ್ಞರು ಮತ್ತು ಕಾವೇರಿ ನೀರಾವರಿ ನಿಗಮ ಇದೆ. ಸುಮಲತಾ ಅವರಾಗಲೀ, ಕುಮಾರಸ್ವಾಮಿ ಅವರಾಗಲೀ ಈ ರೀತಿ ತಪ್ಪು ಸಂದೇಶ ನೀಡಿ, ಲಕ್ಷಾಂತರ ರೈತರ ಜೊತೆ ಆಟವಾಡಬಾರದು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply