masthmagaa.com:
ಸುಪ್ರೀಂ ಕೋರ್ಟ್ನಲ್ಲಿ ಅಬಕಾರಿ ಹಗರಣದ ವಿಚಾರಣೆ ನಡೆದಿದ್ದುಈ ಬಾರಿಯೂ ಅರವಿಂದ್ ಕೇಜ್ರಿವಾಲ್ಗೆ ನಿರಾಸೆಯಾಗಿದೆ. ಮಧ್ಯಂತರ ಜಾಮೀನು ಕೋರಿ ಕೇಜ್ರಿವಾಲ್ ಅರ್ಜಿ ಹಾಕಿದ್ರು. ಆದ್ರೆ ಕೋರ್ಟ್ ಈಗ ಅರ್ಜಿ ವಿಚಾರಣೆಯನ್ನ ಮುಂದೂಡಿದೆ. ಮೇ 09 ಅಥ್ವಾ ಮುಂದಿನ ವಾರ ವಿಚಾರಣೆ ನಡೆಸೋದಾಗಿ ಹೇಳಿದೆ. ಇನ್ನು ವಿಚಾರಣೆ ವೇಳೆ ಕೋರ್ಟ್ ಕೇಜ್ರಿವಾಲ್ಗೆ ಬಿಗ್ ಶಾಕ್ ಕೊಟ್ಟಿದೆ.ಒಂದು ಪಕ್ಷ ಮುಂದಿನ ವಿಚಾರಣೆಯಲ್ಲಿ ಮಧ್ಯಂತರ ಜಾಮೀನು ಸಿಕ್ಕಿದ್ರೂ, ಕೇಜ್ರಿವಾಲ್ತಮ್ಮ ಕೆಲಸದಲ್ಲಿ ಅಂದ್ರೆ ಸಿಎಂ ಹುದ್ದೆಯಲ್ಲಿ ಮುಂದುವರೆಯೋಕೆ ಸಾಧ್ಯವಾಗಲ್ಲ ಅಂತೇಳಿದೆ. ಜೊತೆಗೆ ʻಲೋಕಸಭಾ ಚುನಾವಣೆ ಇಲ್ಲದಿದ್ರೆ, ಅರವಿಂದ್ ಕೇಜ್ರಿವಾಲ್ರಿಗೆ ಮಧ್ಯಂತರ ಜಾಮೀನು ನೀಡೋ ಬಗ್ಗೆ ಯೋಚ್ನೆ ಕೂಡ ಮಾಡ್ತಿರಲಿಲ್ಲʼ ಅಂತ ಕೋರ್ಟ್ ಸ್ಪಷ್ಟವಾದ ದನಿಯಲ್ಲಿ ಕೇಜ್ರಿವಾಲ್ರನ್ನ ತರಾಟೆಗೆ ತಗೊಂಡಿದೆ.
-masthmagaa.com
Contact Us for Advertisement