masthmagaa.com
ದೇಶದಲ್ಲಿ ನಡೆಯುವ ವಂಚನೆಯ ಧಾರ್ಮಿಕ ಮತಾಂತರಗಳನ್ನ ತಡೆಯಲು ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ವಿಚಾರದಲ್ಲಿ ಪ್ರಸ್ತುತ ಯಾವುದಾದ್ರು ಕೇಸ್ ಇದ್ರೆ ಹಾಗೂ ಯಾರನ್ನಾದ್ರು ಮತಾಂತರಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಿದ್ರೆ ಆಗ ಇದನ್ನ ವಿಚಾರಣೆ ನಡೆಸಬಹುದು ಅಂತ ಸುಪ್ರೀಂಕೋರ್ಟ್ ಹೇಳಿದೆ. ಇದೇ ವೇಳೆ ಇದು ಯಾವ ರೀತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL), ಇತ್ತೀಚಿನ ದಿನಗಳಲ್ಲಿ PIL ಒಂದು ಅಸ್ತ್ರವಾಗದ್ದು, ಪ್ರತಿಯೊಬ್ರು PIL ಇಡ್ಕೊಂಡು ಕೋರ್ಟ್ಗೆ ಬರ್ತಾರೆ ಅಂತ ಸಿಜೆಐ ಡಿ,ವೈ ಚಂದ್ರಚೂಡ್ ಅವ್ರ ನೇತೃತ್ವದ ತ್ರಿಸದಸ್ಯ ಪೀಠ ಗರಂ ಆಗಿದೆ.
-masthmagaa.com
Contact Us for Advertisement