masthmagaa.com:
ಅಫ್ಘನಿಸ್ತಾನ ಪರಿಸ್ಥಿತಿಗೆ ಸಂಬಂಧಿಸಿದಂತೆ ಇವತ್ತು ಸರ್ವಪಕ್ಷಗಳ ಸಭೆ ನಡೀತು. ಮೂರೂವರೆ ಗಂಟೆ ಕಾಲ ನಡೆದ ಸಭೆಯಲ್ಲಿ ವಿಪಕ್ಷ ನಾಯಕರಿಗೆ ಅಫ್ಘನ್ ಪರಿಸ್ಥಿತಿ ಬಗ್ಗೆ ವಿಸ್ತೃತ ವಿವರಣೆ ಕೊಡಲಾಯ್ತು. ವಿಪಕ್ಷ ನಾಯಕರು ಪ್ರಶ್ನೆಗಳಿಗೆ ಉತ್ತರ ನೀಡಲಾಯ್ತು. ಸಭೆ ಬಳಿಕ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಅಫ್ಘನಿಸ್ತಾನದಲ್ಲಿರೋ ಬಹುತೇಕ ಭಾರತೀಯರನ್ನ ಕರೆಸಿಕೊಂಡಿದ್ದೇವೆ ಎಂದಿದ್ದಾರೆ. ಇನ್ನು ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡೋ ಬಗ್ಗೆ ಮಾತನಾಡಿದ ಜೈಶಂರ್, ಅದರ ಬಗ್ಗೆ ನಾವು ಇತರ ದೇಶಗಳ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಕಳೆದೆರಡು ದಿನದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಜರ್ಮನಿ ಚಾನ್ಸೆಲರ್ ಮರ್ಕೆಲ್ ಜೊತೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಂಥಾ ಮತ್ತಷ್ಟು ಮೀಟಿಂಗ್ ನಡೆಯಲಿವೆ ಎಂದಿದ್ದಾರೆ.
-masthmagaa.com
Contact Us for Advertisement