masthmagaa.com:
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ನೂರೈವತ್ತು ಭಾರತೀಯರನ್ನು ಅಪಹರಿಸಿ, ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಭಾರತ ಸರ್ಕಾರದ ಮೂಲಗಳು, ಅಪಹರಣಕ್ಕೀಡಾದವರೆಲ್ಲಾ ಸೇಫ್ ಆಗಿದ್ದಾರೆ. ತಾಲಿಬಾನಿಗಳು ಊಟವನ್ನೂ ನೀಡಿದ್ದು, ಕಾಬೂಲ್ ಏರ್ಪೋರ್ಟ್ಗೆ ಹೋಗಲು ಬಿಟ್ಟಿದ್ದಾರೆ. ಅಲ್ಲಿ ಭಾರತೀಯರ ದಾಖಲೆಗಳ ಪರೀಶೀಲನೆ ನಡೀತಾ ಇದೆ ಅಂತ ಮಾಹಿತಿ ಸಿಕ್ಕಿದೆ. ಆದ್ರೆ ಈ ಅಪಹರಣದ ಬಗ್ಗೆ ಸರ್ಕಾರದ ಇನ್ನೂ ಅಧಿಕೃತಪಡಿಸಿಲ್ಲ. ಅತ್ತ ತಾಲಿಬಾನಿ ವಕ್ತಾರ ಅಹ್ಮದುಲ್ಲಾ ವಾಸೆಕ್ ಕೂಡ ಈ ಸುದ್ದಿಯನ್ನು ನಿರಾಕರಿಸಿದ್ಧಾರೆ. ನಾವು ಭಾರತೀಯರನ್ನು ಅಪಹರಿಸಿಲ್ಲ. ಬದಲಾಗಿ ಏರ್ಪೋರ್ಟ್ ತನಕ ಎಸ್ಕಾರ್ಟ್ ಮಾಡಿ, ಸೇಫಾಗಿ ಬಿಟ್ಟು ಬಂದಿದ್ದೀವಿ ಅಂತ ಹೇಳಿದ್ದಾರೆ. ಅದೇ ರೀತಿ ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಖ್ ಸಮುದಾಯದ ನಾಯಕ ಮಂಜಿಂದರ್ ಎಸ್ ಸಿರ್ಸಾ, 300 ಮಂದಿ ಸಿಖ್ಖರು ಗುರುದ್ವಾರದಲ್ಲಿ ಸೇಫಾಗಿದ್ಧಾರೆ. ಅಪಹರಣದಂತ ಯಾವುದೇ ಘಟನೆ ವರದಿಯಾಗಿಲ್ಲ. ಅದೆಲ್ಲಾ ಸುಳ್ಳು ಅಂತ ಹೇಳಿದ್ದಾರೆ.
-masthmagaa.com
Contact Us for Advertisement