ಶ್ರೀಲಂಕಾಕ್ಕೆ ನೆರವು ನೀಡುವಂತೆ ಕೇಂದ್ರಕ್ಕೆ ತಮಿಳನಾಡು ಒತ್ತಾಯ!

masthmagaa.com:

ಶ್ರೀಲಂಕಾಕ್ಕೆ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ತಮಿಳುನಾಡು ನಿರ್ಣಯ ಒಂದನ್ನ ಅಂಗೀಕರಿಸಿದೆ. ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರೊ ಶ್ರೀಲಂಕಾಕ್ಕೆ ಸಹಾಯ ಮಾಡಲು ತಮಿಳುನಾಡು ಸರ್ಕಾರ ಮುಂದಾಗಿದೆ. ಈ ಮೂಲಕ ತಮಿಳುನಾಡು ಸರ್ಕಾರ ಶ್ರೀಲಂಕಾಗೆ ಅಕ್ಕಿ ಮತ್ತು ಅಗತ್ಯ ಔಷಧಿಗಳನ್ನ ಪೂರೈಸಬೇಕಂತ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಒತ್ತಾಯಿಸಿದೆ. ತಮಿಳುನಾಡಿನ ಈ ನಿರ್ಣಯವನ್ನ ಬಿಜೆಪಿ ರಾಜ್ಯ ಘಟಕವೂ ಸ್ವಾಗತಿಸಿದೆ. ಅಂದ್ಹಾಗೆ ನಿರ್ಣಯವನ್ನ, ಸದನದಲ್ಲಿ ಯಾವುದೇ ವಿರೋಧವಿಲ್ದೆ ಸರ್ವಾನುಮತದಿಂದ ಅಗೀಕರಿಸಲಾಗಿದೆ.

-masthmagaa.com

Contact Us for Advertisement

Leave a Reply