ಯಡಿಯೂರಪ್ಪ ಜೈಲಿಗೆ ಹೋಗಿದ್ದು ಹೇಗೆಂದು ಪಠ್ಯದಲ್ಲಿ ಸೇರಿಸಲಿ: ತನ್ವೀರ್ ಸೇಠ್ ವ್ಯಂಗ್ಯ

ಮೈಸೂರು: ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸವನ್ನು ತೆಗೆದುಹಾಕೋ ಬಿಜೆಪಿ ನಿರ್ಧಾರವನ್ನು ಮಾಜಿ ಸಚಿವ ತನ್ವೀರ್ ಸೇಠ್ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಪಠ್ಯ ಕ್ರಮದಿಂದ ಟಿಪ್ಪು ಸುಲ್ತಾನ್ ಇತಿಹಾಸವನ್ನು ತೆಗೆದುಹಾಕಬೇಕು. ಯಾಕಂದ್ರೆ  ಅದರ ಬದಲಾಗಿ ಮಕ್ಕಳಿಗೆ ಯಡಿಯೂರಪ್ಪ ಜೈಲಿಗೆ ಹೋಗಿದ್ದು ಹೇಗೆ..? ಬಿಜೆಪಿ ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿದ್ದು ಹೇಗೆ..? ಯಾವ ಯಾವ ವಿಮಾನದಲ್ಲಿ ಯಾರಿಗೆ ಡ್ರಾಪ್ ಕೊಟ್ಟಿದ್ದರು..? ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಹೇಗೆಲ್ಲಾ ಲೂಟಿ ಮಾಡಿದ್ರು ಅನ್ನೋ ವಿಚಾರಗಳನ್ನು ಮಕ್ಕಳಿಗೆ ಕಲಿಸಬೇಕು. ಟಿಪ್ಪು ಇತಿಹಾಸವನ್ನು ತೆಗೆದುಹಾಕಿ ಆ ಜಾಗದಲ್ಲಿ ಈ ವಿಚಾರಗಳನ್ನು ಸೇರಿಸಿ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಕ್ರೌರ್ಯತೆ ಬಗ್ಗೆ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧವೂ ವ್ಯಂಗ್ಯವಾಡಿದ ಅವರು, ಪ್ರತಾಪ್ ಸಿಂಹ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧೇ ಮಾತನಾಡಿರಬೇಕು ಎಂದು ಹೇಳಿದ್ದಾರೆ.

Contact Us for Advertisement

Leave a Reply