masthmagaa.com:
ಟಿಟಿಡಿ ತಿರುಪತಿ ತಿರುಮಲ ದೇವಸ್ಥಾನಂನಲ್ಲಿರೋ 49.7 ಕೋಟಿ ರೂಪಾಯಿ 500 ಮತ್ತು 1000 ರೂಪಾಯಿಯ ಹಳೆ ನೋಟುಗಳನ್ನು ನಾಶ ಮಾಡಬೇಕಾದ ಪರಿಸ್ಥಿತಿ ಬಂದಿದೆ. 2016ರ ನವೆಂಬರ್ 8ರಂದು ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿದ್ಮೇಲೆ ದೊಡ್ಡ ಸಂಖ್ಯೆಯಲ್ಲಿ ಜನ ಎಲ್ಲೂ ನಡೆಯದ ನೋಟನ್ನು ತಂದು ತಿರುಪತಿ ತಿಮ್ಮಪ್ಪನ ಪಾದಕ್ಕೆ ಅರ್ಪಿಸಿದ್ರು. ಟಿಟಿಡಿ ಎಷ್ಟೇ ಮನವಿ ಮಾಡಿದ್ರೂ ಜನ ಕೇಳಲೇ ಇಲ್ಲ.. ಈಗ ದೇವಸ್ಥಾನದಲ್ಲಿ 6.34 ಲಕ್ಷ 500 ರೂಪಾಯಿಯ ನೋಟು ಇದ್ದು, 1000 ರೂಪಾಯಿ ಮುಖಬೆಲೆಯ 1.8 ಲಕ್ಷ ನೋಟುಗಳಿವೆ. ಈ ನೋಟುಗಳನ್ನು ಎಕ್ಸ್ಚೇಂಜ್ ಮಾಡಲು ಒಂದು ಅವಕಾಶ ಕೊಡಿ ಅಂತ ಕೇಂದ್ರ ಹಣಕಾಸು ಸಚಿವೆ ಬಳಿ ಹಲವು ಬಾರಿ ಕೇಳಿದ್ರು ಯಾವುದೇ ಪ್ರಯೋಜನ ಆಗಿಲ್ಲ. ನಾನು ಆರ್ಬಿಐ ಗವರ್ನರ್ ಜೊತೆ ಮಾತಾಡ್ತೀನಿ ಅಂತ ನಿರ್ಮಲಾ ಸೀತಾರಾಮನ್ ಕಳೆದ ಜುಲೈನಲ್ಲಿ ಹೇಳಿದ್ರೂ ಕೂಡ, ಏನೂ ಪಾಸಿಟಿವ್ ರೆಸ್ಪಾನ್ಸ್ ಇಲ್ಲ. ಹೀಗಾಗಿ ಆ ಹಳೆ ನೋಟುಗಳನ್ನು ನಾಶ ಮಾಡೋದು ಬಿಟ್ರೆ ಬೇರೆ ದಾರಿ ಇಲ್ಲ
-masthmagaa.com
Contact Us for Advertisement