masthmagaa.com:
ಇಷ್ಟು ದಿನ ರಾಜ್ಯವನ್ನ ಯಾರು ಮುಂದುವರೆಸ್ತಾರೆ ಅಂತ ಮಹಾರಾಷ್ಟ ಡ್ರಾಮಾ ನಡೀತಿತ್ತು. ಇದೀಗ ಶಿವಸೇನಾ ಪಕ್ಷವನ್ನ ಯಾರ್ ಲೀಡ್ ಮಾಡ್ತಾರೆ ಅನ್ನೋ ಗೊಂದಲ ಉಂಟಾಗಿದೆ. ಸೋ ಪಕ್ಷದಲ್ಲಿ ತಾವು ಹೊಂದಿರುವ ಸದಸ್ಯರ ಬಹುಮತವನ್ನ ಸಾಬೀತುಪಡಿಸಲು ಸಾಕ್ಷ್ಯವನ್ನ ಒದಗಿಸುವಂತೆ ಕೇಂದ್ರ ಚುನಾವಣಾ ಆಯೋಗ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹಾಗೂ ಉದ್ದವ್ ಠಾಕ್ರೆ ಇಬ್ರಿಗೂ ಸೂಚನೆ ನೀಡಿದೆ. ಪಕ್ಷದ ಚಿಹ್ನೆ ಬಿಲ್ಲು ಮತ್ತು ಬಾಣ ತಮಗೆ ಸೇರಿದ್ದು ಅಂತ ಶಿಂಧೆ ಬಣ ಮನವಿ ಮಾಡಿಕೊಂಡಿತ್ತು. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ 2 ಬಣಗಳಿಗೂ ಆಗಸ್ಟ್ 8ರಂದು ಸಾಕ್ಷ್ಯವನ್ನ ಒದಗಿಸಬೇಕು ಅಂತ ಹೇಳಿದೆ.
-masthmagaa.com
Contact Us for Advertisement