masthmagaa.com:
ರಾಮ ನವಮಿ ಪ್ರಯುಕ್ತ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ನಡೆದಿರುವ ಶೋಭಾಯಾತ್ರೆ ಮೇಲೆ ಕೆಲ ದುಷ್ಕರ್ಮಿಗಳು ಕಲ್ಲುತೂರಾಟ ಮಾಡಿದ್ದಾರೆ. ಯಾತ್ರೆಯ ವೇಳೆ ಕರೆಂಟ್ ಹೋಗಿದೆ. ಅದೆ ಸಮಯಕ್ಕೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಘಟನೆಯನ್ನು ಪರಿಶೀಲಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈಗ ಅಲ್ಲಿ ಕೆಂಡಮುಚ್ಚಿದ ಬೆಂಕಿಯ ಹಾಗೆ ಪರಿಸ್ಥಿತಿ ಇರುವುದರಿಂದ ಯುವುದೇ ಅಹಿತಕರ ಘಟನೆ ನಡೆಯದಂತೆ, 6 ಡಿಎಆರ್, ಎರಡು ಕೆಎಸ್ ಆರ್ ಪಿ ತುಕುಡಿ, ಇಬ್ಬರು Dysp ಹಾಗೂ ಎಸ್ ಪಿ ಸೇರಿ ಸ್ಥಳದಲ್ಲಿ ಟೈಟ್ ಸೆಕ್ಯೂರಿಟಿ ಒದಗಿಸಿದ್ದಾರೆ.
-masthmagaa.com
Contact Us for Advertisement