masthmagaa.com:
ಲೂದಿಯಾನಾ ಕೋರ್ಟ್ನಲ್ಲಿ ಸಂಭವಿಸಿದ ಸ್ಫೋಟ ಸಂಬಂಧ ಉಗ್ರ ಸಂಘಟನೆ ಸಿಖ್ಸ್ ಫರ್ ಜಸ್ಟೀಸ್ನ ಸದಸ್ಯರೊಬ್ಬರನ್ನು ಜರ್ಮನಿಯಲ್ಲಿ ಅರೆಸ್ಟ್ ಮಾಡಲಾಗಿದೆ. ಘಟನೆಯಲ್ಲಿ ಪಾಕಿಸ್ತಾನದ ಬಬ್ಬರ್ ಖಾಲ್ಸಾ ಉಗ್ರ ಸಂಘಟನೆಯ ಸದಸ್ಯ ಹರ್ವಿಂದರ್ ಸಿಂಗ್ ಸಂಧು, ಸಿಖ್ಸ್ ಫರ್ ಜಸ್ಟೀನ್ ಸಂಘಟನೆಗೆ ಸೇರಿದ ಜಸ್ವಿಂದರ್ ಸಿಂಗ್ ಮುಲ್ತಾನಿ ಮತ್ತು ಆತನ ಸಹಾಯಕ ಗುರ್ಪತ್ವಂತ್ ಸಿಂಗ್ ಪನ್ನು ಸೇರಿಕೊಂಡು ಲೂದಿಯಾನಾ ಸ್ಫೋಟಕ್ಕೆ ಪ್ಲಾನ್ ಮಾಡಿದ್ರು. ಇದಾದ್ಮೇಲೆ ದೆಹಲಿಯಲ್ಲೂ ಹಲವು ಕಡೆ ಸ್ಫೋಟಕ್ಕೆ ಸಂಚು ರೂಪಿಸಿದ್ರು ಅಂತ ಪೊಲೀಸರು ತಿಳಿಸಿದ್ದಾರೆ. ಇವರ ಪೈಕಿ ಜರ್ಮನಿಯ ರಾಜತಾಂತ್ರಿಕ ನೆರವಿನಿಂದ ಜಸ್ವಿಂದರ್ ಸಿಂಗ್ ಮುಲ್ತಾನಿಯನ್ನು ಅರೆಸ್ಟ್ ಮಾಡಲಾಗಿದ್ದು, ಸದ್ಯದಲ್ಲೇ ಭಾರತದ ಪೊಲೀಸ್ ಅಧಿಕಾರಿಗಳು ಹೋಗಿ ಕರ್ಕೊಂಡು ಬರಲಿದ್ದಾರೆ. ಇನ್ನು ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ರೈತ ನಾಯಕ ಬಲ್ಬೀರ್ ಸಿಂಗ್ ರಜೆವಾಲ್ರನ್ನು ಹತ್ಯೆ ಮಾಡಿ, ಹಿಂಸಾಚಾರ ಸೃಷ್ಟಿಸಲು ಕೂಡ ಪ್ಲಾನ್ ಮಾಡಲಾಗಿತ್ತು. ಆದ್ರೆ ಅದನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ರು.
-masthmagaa.com
Contact Us for Advertisement