masthmagaa.com:
ಪ್ರಧಾನಿ ಮೋದಿ ಪಂಜಾಬ್ ಭೇಟಿ ವೇಳೆ ಭದ್ರತಾ ವೈಫಲ್ಯ ದಿನಕ್ಕೊಂದು ತಿರುವು ಪಡ್ಕೊಳ್ತಿದೆ. ಕಳೆದ ವಾರ ಕೆಲ ವಕೀಲರು ನಮಗೆ ಖಲಿಸ್ತಾನಿ ಸಂಘಟನೆಯಾದ ಸಿಖ್ ಫರ್ ಜಸ್ಟೀಸ್ನಿಂದ ಬೆದರಿಕೆ ಕರೆ ಬಂದಿದೆ ಅಂತ ಆರೋಪಿಸಿದ್ರು. ಅದ್ರ ನಡುವೆಯೇ ಈಗ ಸುಪ್ರೀಂಕೋರ್ಟ್ ರಚಿಸಿರೋ ತನಿಖಾ ತಂಡದ ನೇತೃತ್ವ ವಹಿಸಿರೋ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರಿಗೂ ಬೆದರಿಕೆಯ ವಾಯ್ಸ್ ನೋಟ್ ಬಂದಿದೆ. ಈ ಪ್ರಕರಣದ ತನಿಖೆ ನಡೆಸೋಕೆ ನಾವು ಬಿಡೋದಿಲ್ಲ. ಪ್ರಧಾನಿ ಮೋದಿ ಮತ್ತು ಸಿಖ್ಖರು.. ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು..ಜನವರಿ 26ರಂದು ಪ್ರಧಾನಿ ಮೋದಿಯವರನ್ನೂ ಬ್ಲಾಕ್ ಮಾಡ್ತೀವಿ ಅಂತ ಎಚ್ಚರಿಸಲಾಗಿದೆ. ಇದೇ ರೀತಿಯ ಸಂದೇಶವನ್ನು ಲಾಯರ್ಗಳಿಗೂ ಕಳುಹಿಸಲಾಗಿದೆ. ಸುಪ್ರೀಂಕೋರ್ಟ್ ಲಾಯರ್ಗಳ ಲಿಸ್ಟ್ ಮಾಡ್ತಿದ್ದೀವಿ ಈ ಪ್ರಕರಣದಿಂದ ಸಾಧ್ಯವಾದಷ್ಟು ದೂರ ಇರಿ ಅಂತ ಬೆದರಿಸಲಾಗಿದೆ. ಜೊತೆಗೆ ಕಳೆದ ವಾರ ನಾವು ಸಂದೇಶ ಕಳುಹಿಸಿದ್ದರ ಬಗ್ಗೆ ಪೊಲೀಸ್ ಕಂಪ್ಲೆಂಟ್ ದಾಖಲಿಸಲಾಗಿದೆ. ಹೀಗಾಗಿ ಮುಸ್ಲಿಂ ವಿರೋಧಿ, ಸಿಖ್ ವಿರೋಧಿ ಸುಪ್ರೀಂಕೋರ್ಟ್ ಲಾಯರ್ಗಳನ್ನು ಇದಕ್ಕೆ ಜವಾಬ್ದಾರರನ್ನಾಗಿ ಮಾಡಲಾಗುತ್ತೆ ಅಂತಲೂ ಎಚ್ಚರಿಸಲಾಗಿದೆ ಅಂತ ಮಾಹಿತಿ ಲಭ್ಯವಾಗಿದೆ.
-masthmagaa.com
Contact Us for Advertisement