masthmagaa.com:
ಪಂಜ್ಶಿರ್ ತಾಲಿಬಾನಿಗಳಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಇದೀಗ ಅಫ್ಘನಿಸ್ತಾನದ ಪರ್ವಾನ್ ಪ್ರಾಂತ್ಯದಲ್ಲಿ ಪಂಜ್ಶೀರ್ ನಾಯಕರು ಮತ್ತು ಬುಡಕಟ್ಟು ನಾಯಕರ ಜೊತೆ ತಾಲಿಬಾನಿಗಳು ನಡೆಸಿದ ಮಾತುಕತೆ ವಿಫಲವಾಗಿದೆ. ಈ ವಿಚಾರವನ್ನ ತಾಲಿಬಾನ್ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಆಯೋಗದ ಮುಖ್ಯಸ್ಥ ಮುಲ್ಲಾ ಅಮಿರ್ ಖಾನ್ ಮೊಟಾಕಿ ಸ್ಪಷ್ಟಪಡಿಸಿದ್ದಾರೆ. ಅಂದ್ಹಾಗೆ ಈ ಮೊಟಾಕಿ ಪಂಜ್ಶಿರ್ ಜನತೆಗೆ ಒಂದು ಆಡಿಯೋ ಸಂದೇಶ ರವಾನಿಸಿದ್ದಾರೆ. ಅದರಲ್ಲಿ ಇಸ್ಲಾಮಿಕ್ ಎಮಿರೇಟ್ ಸೇರುವಂತೆ ಪಂಜ್ಶಿರ್ ಜನತೆಗೆ ಆಹ್ವಾನಿಸಿದ್ದಾರೆ. ಜೊತೆಗೆ ಪಂಜ್ಶಿರ್ನಲ್ಲಿ ತಾಲಿಬಾನಿಗಳ ವಿರುದ್ಧ ನಿಂತಿರೋ ಫೈಟರ್ಗಳಿಗೂ ಕನ್ವಿನ್ಸ್ ಮಾಡಿ.. ನಾವು ಇನ್ನೂ ಕೂಡ ಈ ಸಮಸ್ಯೆಯನ್ನು ಶಾಂತಿಯುತವಾಗಿಯೇ ಬಗೆಹರಿಸಿಕೊಳ್ಳಲು ಕಾಯ್ತಿದ್ದೀವಿ ಅಂತ ಹೇಳಿದ್ದಾರೆ. ಆದ್ರೆ ಅದು ವ್ಯರ್ಥವಾಗಿದೆ ಅಂತ ವರದಿಯಾಗಿದೆ. ಈ ಮೂಲಕ ತಾಲಿಬಾನ್ ವಿರುದ್ಧ ಪಂಜ್ಶಿರ್ ಹೋರಾಟ ಮುಂದುವರಿದಂತಾಗಿದೆ. ಅಂದ್ಹಾಗೆ ಇವತ್ತು ಬೆಳಗ್ಗೆಯಷ್ಟೇ ಪಂಜ್ಶಿರ್ ಜೊತೆ ಸೇರಿರೋ ನ್ಯಾಷನಲ್ ರೆಸಿಸ್ಟೆನ್ಸ್ ಫೋರ್ಸ್, ತಾವು 350 ಮಂದಿ ತಾಲಿಬಾನಿಗಳನ್ನು ಹೊಡೆದುರುಳಿಸಿದ್ದೀವಿ ಅಂತ ಘೋಷಿಸಿತ್ತು.
-masthmagaa.com
Contact Us for Advertisement