NIA ಮೇಲಿನ ದಾಳಿಗೆ PM ಗರಂ: ದೀದಿ ಸರ್ಕಾರದ ವಿರುದ್ದ ಮೋದಿ ವಾಗ್ದಾಳಿ!

masthmagaa.com:

ಪಶ್ಚಿಮ ಬಂಗಾಳದಲ್ಲಿ ರಾಷ್ಟೀಯ ತನಿಖಾ ದಳದ (NIA) ಮೇಲೆ ದಾಳಿ ನಡೆದ ವಿಚಾರವಾಗಿ ಪ್ರಧಾನಿ ಮೋದಿ ಟಿಎಂಸಿ ಪಕ್ಷವನ್ನ ತರಾಟೆಗೆ ತೆಗೆದು ಕೊಂಡಿದ್ದಾರೆ. ಬಂಗಾಳದ ಜಲ್ಪೈಗುರಿಯಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಟಿಎಂಸಿ ತನ್ನ ಭ್ರಷ್ಟ ನಾಯಕರಿಗೆ ಅಪರಾಧ ಕೃತ್ಯಗಳನ್ನ ಎಸಗಲು ಫ್ರೀ ಲೈಸನ್ಸ್‌ ನೀಡ್ತಿದೆ. ಯಾವಾಗೆಲ್ಲಾ ರಾಷ್ಟ್ರೀಯ ತನಿಖಾಧಿಕಾರಿಗಳ ತಂಡ ಬಂಗಾಳಕ್ಕೆ ಬರುತ್ತೆ ಆ ಸಂದರ್ಭಗಳಲ್ಲಿ ಟಿಎಂಸಿಯವ್ರು ತನಿಖಾ ದಳದ ಮೇಲೆ ದಾಳಿ ಮಾಡಿ ತನಿಖೆಗೆ ಅಡ್ಡಿ ಪಡಿಸ್ತಾರೆ. ಈ ಟಿಎಂಸಿ ಸರ್ಕಾರ ಕೇಂದ್ರದ ಜನಪರ ಯೋಜನೆಗಳನ್ನ ಕೂಡ ಬಂಗಾಳದಲ್ಲಿ ಅನುಷ್ಠಾನ ಮಾಡಿಲ್ಲ ಅಂತ ಮೋದಿ, ದೀದಿ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.

-masthmagaa.com

Contact Us for Advertisement

Leave a Reply