masthmagaa.com
20ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಇಂದು ಇಂಡೋನೇಷ್ಯಾಗೆ ತೆರಳಿದ್ದಾರೆ. ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಅವರ ಆಹ್ವಾನದ ಮೇರೆಗೆ ಮೋದಿಯವರು ಜಕಾರ್ತಗೆ ಭೇಟಿ ನೀಡುತ್ತಿದ್ದು, ಈ ಸಭೆಗಳು ನಾಳೆ ನಡೆಯಲಿವೆ. ಈ ಬಗ್ಗೆ ಪ್ರಧಾನಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, ಅದ್ರಲ್ಲಿ ಪ್ರೈಮ್ ಮಿನಿಸ್ಟರ್ ಆಫ್ ಭಾರತ ಅಂತ ಮೆನ್ಷನ್ ಮಾಡಲಾಗಿದೆ. ಈ ಮೂಲಕ ಇಂಡಿಯಾ ತೆಗೆದು ಭಾರತ ಬಳಸಬೇಕು ಅನ್ನೊ ಚರ್ಚೆಗೆ ಇನ್ನಷ್ಟು ಇಂಬು ನೀಡಿದಂತಾಗಿದೆ. ಆದ್ರೆ ಈ ಹೇಳಿಕೆಯಲ್ಲಿ ಮೇಲೆ ಭಾರತ ಅಂತ ಬಳಸಿ ಕೆಳಗಡೆ ಆಸಿಯಾನ್-ಇಂಡಿಯಾ ಸಭೆ ಅಂತ ಬರೆಯಲಾಗಿದೆ. ಇನ್ನು ಮೋದಿಯವರು ಅದೇ ದಿನ ಅಂದ್ರೆ ನಾಳೆ ಸಂಜೆ ಭಾರತಕ್ಕೆ ಮರಳಲು ಅನುಕೂಲವಾಗುವಂತೆ ಆಸಿಯಾನ್-ಭಾರತ ಶೃಂಗಸಭೆ ಮತ್ತು ಪೂರ್ವ ಏಷ್ಯಾ ಶೃಂಗಸಭೆ ವೇಳಾಪಟ್ಟಿಯನ್ನು ಸಿದ್ದಪಡಿಸಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.
-masthmagaa.com
Contact Us for Advertisement