masthmagaa.com:
ಮುಂಬರುವ ಎಲೆಕ್ಷನ್ನಲ್ಲಿ 66 ಪರ್ಸೆಂಟ್ ಟಿಕೆಟ್ನ್ನು ಅಲ್ಪಸಂಖ್ಯಾತರಿಗೆ ನೀಡ್ತಿದ್ದೀವಿ ಅಂತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಬಿಜೆಪಿ ಸರ್ಕಾರ ಮಾತ್ರವಲ್ಲ.. ಪಕ್ಷ ಕೂಡ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡುತ್ತೆ.. ಈ ಸಲ ಎಲೆಕ್ಷನ್ನಲ್ಲಿ 66 ಪರ್ಸೆಂಟ್ನಷ್ಟು ಟಿಕೆಟ್ನ್ನು ಅಲ್ಪಸಂಖ್ಯಾತರಿಗೆ ಕೊಟ್ಟಿದ್ದೀವಿ ಅಂತ ಹೇಳಿದ್ದಾರೆ.
ಬಿಜೆಪಿ ಮೈತ್ರಿ ಪಕ್ಷ ಅಪ್ನಾದಳ್ ಕೂಡ ತನ್ನ ಮೊದಲ ಅಭ್ಯರ್ಥಿಯನ್ನು ಘೋಷಿಸಿದೆ. ಆ ಮೊದಲ ಟಿಕೆಟ್ಟನ್ನು ರಾಂಪುರ ಜಿಲ್ಲೆಯ ಸುಆರ್ ಕ್ಷೇತ್ರದಿಂದ ಹೈದರ್ ಅಲಿ ಖಾನ್ಗೆ ನೀಡಿದೆ.
ಭಾರತದ ಅತಿ ಎತ್ತರದ ಮನುಷ್ಯ ಧರ್ಮೇಂದ್ರ ಪ್ರತಾಪ್ ಸಿಂಗ್ ಸಮಾಜವಾದಿ ಪಕ್ಷ ಸೇರಿದ್ದಾರೆ. ಉತ್ತರ ಪ್ರದೇಶದ ಪ್ರತಾಪ್ಘರ್ ಮೂಲದ ಇವರು 8.1 ಅಡಿ ಎತ್ತರ ಇದ್ದಾರೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ನಾನೇ ಅಂತ ಇನ್ಡೈರೆಕ್ಟಾಗಿ ಹೇಳಿಕೊಂಡಿರೋ ಪ್ರಿಯಾಂಕಾ ವಾದ್ರಾಗೆ ಬಿಎಸ್ಪಿ ಅಧಿನಾಯಕಿ ಮಾಯಾವತಿ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಬಿಜೆಪಿಯೇತರ ವೋಟ್ ಬ್ಯಂಕ್ ಒಡೆಯೋದು ಬಿಟ್ಟು ಬೇರೇನೂ ಮಾಡಲ್ಲ. ಹೀಗಾಗಿ ಎಲ್ಲರೂ ಬಿಎಸ್ಪಿಗೆ ಓಟ್ ಹಾಕಿ ಅಂತ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದ್ರೆ, ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆದ್ದು, ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಪಕ್ಷದ ನಾಯಕ ಕೇಶವ ಪ್ರಸಾದ್ ಮೌರ್ಯ ಹೇಳಿದ್ದಾರೆ.
-masthmagaa.com
Contact Us for Advertisement