ಕೊನೆಗೂ ಯುಕ್ರೇನ್​ನ 5 ನಗರದಲ್ಲಿ ದಾಳಿ ನಿಲ್ಲಿಸಿದ ರಷ್ಯಾ

masthmagaa.com:

ಯುದ್ಧಪೀಡಿತ ಯುಕ್ರೇನ್​ನಿಂದ ಜನರನ್ನ ಸೇಫಾಗಿ ಶಿಫ್ಟ್​ ಮಾಡಲು ನಡೀತಿರೋ ಪ್ರಯತ್ನಗಳು ಪದೇಪದೆ ವಿಫಲವಾಗ್ತಿರೋ ನಡುವೆ, ಇವತ್ತು ರಷ್ಯಾ ಮತ್ತೊಮ್ಮೆ ಕದನ ವಿರಾಮದ ಆಫರ್​ ಕೊಟ್ಟಿದೆ. ಈಸಲ ಐದು ನಗರಗಳಲ್ಲಿ ಕದನ ವಿರಾಮ ಘೋಷಿಸ್ತಿದ್ದೀವಿ. ರಾಜಧಾನಿ ಕಿಯವ್​, ಖಾರ್ಕಿವ್​, ಸುಮಿ, ಮಾರಿಯೋಪೋಲ್​ ಮತ್ತು ಹೊಸದಾಗಿ ಚೆರ್ನಿಹಿವ್ ನಗರಗಳನ್ನ ಈ ಪಟ್ಟಿಗೆ ಸೇರಿಸಿದ್ದೀವಿ. ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ನಾವು ದಾಳಿ ಮಾಡಲ್ಲ. ಹ್ಯುಮನಿಟೇರಿಯನ್​ ಕಾರಿಡಾರ್​ಗೆ ಅವಕಾಶ ಕೊಡ್ತೀವಿ ಅಂತ ರಷ್ಯಾದ ರಕ್ಷಣಾ ಇಲಾಖೆ ಹೇಳಿದೆ. ಆದ್ರೆ ಒನ್ಸ್ ಅಗೈನ್​ ಹ್ಯುಮನಿಟೇರಿಯನ್​ ಕಾರಿಡಾರ್​​ಗೆ ರಷ್ಯಾ ಗುರ್ತಿಸಿರೋ ಬಹುತೇಕ ಮಾರ್ಗಗಳು ರಷ್ಯಾಗೆ ಹೋಗುತ್ತವೆ. ರೂಟ್​ ರಷ್ಯಾ ಕಡೆ ಇರೋದ್ರಿಂದನೇ ನಿನ್ನೆಯ ಕದನ ವಿರಾಮ ವಿಫಲವಾಗಿತ್ತು. ಈಗ ಮತ್ತೆ ಅಂಥದ್ಧೇ ಆಫರ್ ಕೊಟ್ಟಿದೆ ರಷ್ಯಾ. ಇದಕ್ಕೆ ಯುಕ್ರೇನ್ ಏನ್​ ಹೇಳುತ್ತೆ ನೋಡ್ಬೇಕು.

ಯುಕ್ರೆನ್​ನ ಈಶಾನ್ಯ ಭಾಗದಲ್ಲಿ ಬರೋ ಸುಮಿ ನಗರ ಮತ್ತು ಅದರ ಸುತ್ತಮುತ್ತ ರಷ್ಯಾ ಸೇನೆ ಸೋಮವಾರ ರಾತ್ರಿ ನಡೆಸಿದ ವಾಯುದಾಳಿಯಲ್ಲಿ ಮಕ್ಕಳು ಸೇರಿದಂತೆ ಸುಮಾರು 10 ಜನ ಜನ ಮೃತಪಟ್ಟಿದ್ದಾರೆ. ಸುಮಿ ರೀಜಿನಲ್​ ಮಿಲಿಟರಿ ಅಡ್ಮಿನಿಸ್ಟ್ರೇಷನ್​​ನ ಮುಖ್ಯಸ್ಥ ಈ ಮಾಹಿತಿ ಕೊಟ್ಟಿದ್ದಾರೆ. ಸುಮಿ ನಗರದಲ್ಲಿ 600ಕ್ಕೂ ಭಾರತೀಯರು ಕೂಡ ಸಿಲುಕಿಕೊಂಡಿದ್ದಾರೆ ಅಂತ ನಿನ್ನೆಯಷ್ಟೇ ಭಾರತ ಸರ್ಕಾರ ಹೇಳಿತ್ತು.

ಮತ್ತೊಂದುಕಡೆ ಯುಕ್ರೇನ್​​ನ ದಕ್ಷಿಣ ಭಾಗದಲ್ಲಿರೋ ಮೈಕೊಲೈವ್​ ನಗರದಲ್ಲಿ ಜನವಸತಿ ಪ್ರದೇಶದ ಮೇಲೆ ದಾಳಿ ನಡೆದಿದೆ. ಇದರಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಯುಕ್ರೇನ್​ನ ಪೂರ್ವ ಭಾಗದಲ್ಲಿರೋ ಖಾರ್ಕಿವ್​ ನಗರದಲ್ಲಿ ನಡೆದ ದಾಳಿಯಲ್ಲಿ ಅಪಾರ್ಟ್​​ಮೆಂಟ್​ಗೆ ಹಾನಿಯಾಗಿದೆ. ಇಲ್ಲೂ ಕನಿಷ್ಠ ನಾಲ್ಕು ಜನ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಬಂದರು ನಗರಿ ಒಡೆಸಾದಲ್ಲಿ ಮಂಗಳವಾರ ಬೆಳಗಿನಜಾವನ ನಾಲ್ಕು ಸಲ ಭಾರಿ ಸ್ಫೋಟದ ಸದ್ದು ಕೇಳಿಸಿದೆ.

ರಷ್ಯಾ ಸೇನೆಯ ಮತ್ತೊಬ್ಬ ಪ್ರಮುಖ ಜನರಲ್‌ನನ್ನ ಖಾರ್ಕಿವ್​ನಲ್ಲಿ ಹತ್ಯೆ ಮಾಡಿದ್ದೀವಿ ಅಂತ ಯುಕ್ರೇನ್‌ ಹೇಳಿಕೊಂಡಿದೆ. ರಷ್ಯಾ ಸೇನೆಯ 41ನೇ ತುಕಡಿಯ ಫರ್ಸ್ಟ್‌ ಡೆಪ್ಯುಟಿ ಕಮ್ಯಾಂಡರ್‌ ವಿಟಲಿ ಗೆರಾಸಿಮೋವ್‌ ಹತ್ಯೆಯಾಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ರಷ್ಯಾ ಇನ್ನೂ ಪ್ರತಿಕ್ರಿಯಿಸಿಲ್ಲ. ಇತ್ತೀಚೆಗೆ ರಷ್ಯಾದ ಜನರಲ್​ ಅಂಡ್ರಿ ಸುಖೊವೆಟ್ಸ್ಕಿ ಅನ್ನೋರನ್ನ ಹೊಡೆದು ಹಾಕಿತ್ತು ಯುಕ್ರೇನ್​. ಯುಕ್ರೇನ್‌ ಇದುವರೆಗು ರಷ್ಯಾದ 11 ಸಾವಿರ ಸೈನಿಕರನ್ನು ಕೊಂದಿರುವದಾಗಿ ಹೇಳಿಕೊಂಡಿದೆ. ಆದ್ರೆ ರಷ್ಯಾ 500 ಜನರ ಬಗ್ಗೆ ಮಾತ್ರ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply