masthmagaa.com:
ಉತ್ತರ ಪ್ರದೇಶದಲ್ಲಿ ರಿಕ್ಷಾ ಎಳೆಯೋ ವ್ಯಕ್ತಿಯೊಬ್ಬರಿಗೆ 3 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಮಥುರಾ ಜಿಲ್ಲೆಯ ನಿವಾಸಿಯಾದ ಪ್ರತಾಪ್ ಸಿಂಗ್ ನೋಟಿಸ್ ನೋಡಿ ಗಾಬರಿಯಾಗಿದ್ದು, ಬೇರೆ ದಾರಿಯಿಲ್ಲದೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದ್ರೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ. ಆದ್ರೆ ಈ ಬಗ್ಗೆ ಗಮನ ಹರಿಸೋದಾಗಿ ಭರವಸೆ ನೀಡಿದ್ದಾರೆ. ಇದ್ರ ಬೆನ್ನಲ್ಲೇ ಪ್ರತಾಪ್ ಸಿಂಗ್, ಎಲ್ಲವನ್ನೂ ಹೇಳಿಕೊಂಡು ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನೋಟಿಸ್ನಲ್ಲಿ ಇವರ ಹೆಸರಲ್ಲಿ ಜಿಎಸ್ಟಿ ನಂಬರ್ ಪಡೆಯಲಾಗಿದ್ದು, ಅದ್ರ ಅಡಿಯಲ್ಲಿ 43.44 ಕೋಟಿ ರೂಪಾಯಿ ವ್ಯವಹಾರ ನಡೆಸಲಾಗಿದೆ. 3.47 ತೆರಿಗೆ ಪಾವತಿಸಬೇಕು ಅಂತ ಹೇಳಲಾಗಿದೆ.
-masthmagaa.com
Contact Us for Advertisement