masthmagaa.com:
ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನ ಭಾರತ ಆಹ್ವಾನಿಸಿತ್ತು. ಆದ್ರೆ ಬೋರಿಸ್ ಜಾನ್ಸನ್ ಈ ಸಲ ಭಾರತಕ್ಕೆ ಬರಲ್ಲ ಅಂತ ಹೇಳಿದ್ದು, ಪ್ರವಾಸವನ್ನ ಕ್ಯಾನ್ಸಲ್ ಮಾಡಿದ್ದಾರೆ. ಈ ಸಂಬಂಧ ಭಾರತದ ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ. ಬೋರಿಸ್ ಜಾನ್ಸನ್ ಕೊನೇ ಕ್ಷಣದಲ್ಲಿ ಭಾರತ ಪ್ರವಾಸ ಕ್ಯಾನ್ಸಲ್ ಒನ್ಸ್ ಅಗೈನ್ ಈ ಕೊರೋನಾನೇ ಕಾರಣ.. ಹೌದು, ಬ್ರಿಟನ್ನಲ್ಲಿ ರೂಪಾಂತರಿ ಕೊರೋನಾ ವೈರಸ್ ಹಾವಳಿ ಇಡ್ತಿದೆ. ಅದನ್ನ ಕಂಟ್ರೋಲ್ ಮಾಡೋಕೆ ಆ ದೇಶದಲ್ಲಿ ನ್ಯಾಷನಲ್ ಲಾಕ್ಡೌನ್ ಹೇರಲಾಗಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ದೇಶದಲ್ಲೇ ಇದ್ದು ನನ್ನ ಜವಾಬ್ದಾರಿ ಕಡೆ ಗಮನಹರಿಸಬೇಕಿದೆ ಅಂತ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಅಲ್ಲದೆ 2021ರ ಮೊದಲಾರ್ಧದಲ್ಲಿ ಭಾರತಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
-masthmagaa.com
Contact Us for Advertisement