masthmagaa.com:
ಉತ್ತರ ಪ್ರದೇಶದ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆಯಾಗಿದ್ದು, ಹತ್ಯೆಯ ಮಾಸ್ಟರ್ ಮೈಂಡ್ ಆದ ಆತಿಕ್ ಅಹ್ಮದ್ನನ್ನ ಉತ್ತರ ಪ್ರದೇಶ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇಷ್ಟು ದಿನ ಗುಜರಾತ್ನ ಸಬರಮತಿ ಜೈಲಿನಲ್ಲಿದ್ದ ಪ್ರಮುಖ ಆರೋಪಿ ಅತಿಕ್ ಜೈಲಿನಿಂದ ಹೊರಬರಲು ಭಯಪಡ್ತಿದ್ದ ಅಂತ ಹೇಳಲಾಗಿತ್ತು. ಯಾಕಂದ್ರೆ ಉಮೇಶ್ಪಾಲ್ ಹತ್ಯೆ ಕೇಸ್ಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಈಗಾಗಲೇ ಎನ್ಕೌಂಟರ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತನಗೂ ಅದೇ ಗತಿಯಾಗಬಹುದು ಅಂತ ಜೈಲಿನಿಂದ ಹೊರಗೆ ಬರಲು ಅತಿಕ್ ನಿರಾಕರಿಸಿದ್ದ ಎನ್ನಲಾಗಿತ್ತು. ಆದ್ರೆ ಉತ್ತರ ಪ್ರದೇಶ ಪೊಲೀಸರು ಇಂದು ಆತಿಕ್ನನ್ನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇತ್ತ ಇದೇ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೊಹಮ್ಮದ್ ಗುಲಾಮ್ನನ್ನ ಪ್ರಯಾಗ್ರಾಜ್ ಪೊಲೀಸರು ಪತ್ತೆ ಮಾಡಿದ್ದಾರೆ. ಇತ್ತೀಚೆಗೆ ಪ್ರಯಾಗ್ರಾಜ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಪೊಲೀಸರು ಆರೋಪಿ ವಿಜಯ್ ಕುಮಾರ್ ಅಲಿಯಾಸ್ ಉಸ್ಮಾನ್ ಚೌಧರಿಯನ್ನು ಹತ್ಯೆ ಮಾಡಿದ್ದರು. ಅವನ ಫೋನ್ ಮೂಲಕ ಗುಲಾಮ್ ಅಡಗಿಕೊಂಡಿದ್ದ ಸ್ಥಳವನ್ನ ಪತ್ತೆ ಹಚ್ಚಿರೋದಾಗಿ ಹೇಳಿದ್ದಾರೆ. ಈ ಗುಲಾಮ್ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾಗುತ್ತಿದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅಲ್ಲಿನ ವಿಧಾನಸಭೆಯಲ್ಲಿ ಮಾಫಿಯಾ ವಿರುದ್ದ ಸಮರ ಸಾರಿದಾಗಿನಿಂದ ಹತ್ಯೆ ಪ್ರಕರಣದಲ್ಲಿ ರೋಚಕ ಬೆಳವಣಿಗೆಗಳು ಆಗ್ತಾಯಿವೆ.
-masthmagaa.com
Contact Us for Advertisement