masthmagaa.com:
ಮೊಹರಂ ವೇಳೆ ಯಾವುದೇ ರೀತಿಯ ಮೆರವಣಿಗೆಗಳನ್ನು ನಡೆಸಲು ಅವಕಾಶ ನೀಡಬಾರದು ಅಂತ ಉತ್ತರ ಪ್ರದೇಶ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಕೊರೋನಾ ಮತ್ತು ಭದ್ರತೆಯ ಕಾರಣವನ್ನು ನೀಡಿರೋ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅಸ್ವತಿ, ಸಾರ್ವಜನಿಕವಾಗಿ ಮೊಹರಂ ಕಾರ್ಯಕ್ರಮ ಮಾಡುವಂತಿಲ್ಲ. ಮನೆಯಲ್ಲೇ ಮಾಡಿಕೊಳ್ಳಬೇಕು ಅಂತ ಸೂಚಿಸಿದ್ದಾರೆ. ಅಲ್ಲದೆ ಈ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು ಅಂತ ಕೂಡ ಕಟ್ಟಪ್ಪಣೆ ಮಾಡಲಾಗಿದೆ. ಅಂದಹಾಗೆ ಇದೇ ಆಗಸ್ಟ್ 20ರಂದು ಮೊಹರಂ ಹಬ್ಬ ನಡೆಯಲಿದೆ.
-masthmagaa.com
Contact Us for Advertisement