masthmagaa.com:
ಬುಲ್ಡೋಜರ್ ಬಾಬಾ ಯೋಗಿ ಈಗ ಬುಲೆಟ್ ಬಾಬಾ ಆಗ್ತಿದ್ದಾರೆ. ಯುಪಿಯ ಆವ್ರಿಯಾನಲ್ಲಿ ವ್ಯಾಪರಿಯೊಬ್ರ 12 ವರ್ಷದ ಮಗನನ್ನ 8 ಮಂದಿ ದುಷ್ಕರ್ಮಿಗಳು ಸೇರ್ಕೊಂಡು ಕಿಡ್ನಾಪ್ ಮಾಡಿದ್ರು. ಇದೀಗ ಆ ಎಂಟೂ ಮಂದಿ ಅಪಹರಣಕಾರರನ್ನ ಪೊಲೀಸರು ಹಿಡಿದಾಕಿದ್ದಾರೆ. ಹೇಗೆ ಗೊತ್ತಾ? ಆ ಎಂಟೂ ಮಂದಿಯ ಕಾಲುಗಳಿಗೆ ಗುಂಡು ಹಾರಿಸಿ ಗಾಯಗೊಳಿಸಿ ಹಿಡಿಯಲಾಗಿದೆ. ಸದ್ಯ ಈ ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. A1 ರಿಯಾಜ್ ಸಿದ್ದಿಕ್ಕಿ ಕಿಡ್ನಾಪ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನ ಕಾಲ್ ರೆಕಾರ್ಡ್ ಬಳಸಿ ಆವ್ರಿಯಾ ಪೊಲೀಸರು ನೊಯ್ಡಾ ಪೊಲೀಸರು ಸಹಕಾರದಲ್ಲಿ ಕಿಡ್ನಾಪ್ ಆಗಿದ್ದ ಬಾಲಕನಿದ್ದ ಸ್ಥಳವನ್ನ ಪತ್ತೆಹಚ್ಚಿದ್ದಾರೆ. ಆದ್ರೆ ಪೊಲೀಸರು ಅಲ್ಲಿಗೆ ರೀಚ್ ಆಗುವಷ್ಟ್ರಲ್ಲೇ ಬಾಲಕ ಅಸುನೀಗಿದ್ದ. ನಂತರ ಕಾರ್ಯಾಚರಣೆ ನಡೆಸಿ ದುಷ್ಟರ್ಮಿಗಳನ್ನ ಹಿಡಿಯಲಾಗದೆ. ತಪ್ಪಿಸಿಕೊಳ್ತಿದ್ದ ಅವರ ಕಾಲುಗಳಿಗೆ ಗುಂಡು ಹಾರಿಸಿ ಹಿಡಿಯಲಾಗಿದೆ. ಅಂದ್ಹಾಗೆ ಮೊನ್ನೆ ತಾನೆ ಸಲೂನ್ ಮಾಲೀಕನೊಬ್ಬ ಪಕ್ಕದ ಮನೆಗೆ ನುಗ್ಗಿ ಇಬ್ಬರು ಅಪ್ರಾಪ್ತ ಬಾಲಕರನ್ನ ಹತ್ಯೆ ಮಾಡಿದ್ದ, ಅವನಿಗೂ ಯುಪಿ ಪೋಲಿಸರು ಇನ್ಸ್ಟಂಟ್ ಪರಲೋಕಕ್ಕೆ ಕಳಿಸಿದ್ರು… ಕಳೆದ ವರ್ಷದ ಮಾರ್ಚ್ನ ಡೇಟಾ ಪ್ರಕಾರ ಯುಪಿಯಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ 6 ವರ್ಷದಲ್ಲಿ 10.7 ಸಾವಿರ ಎನ್ಕೌಂಟರ್ಗಳು ನಡೆದು ಅದ್ರಲ್ಲಿ 178 ಜನರನ್ನ ಹತ್ಯೆ ಮಾಡಲಾಗಿದೆ.
-masthmagaa.com
Contact Us for Advertisement