masthmagaa.com:
ಇನ್ನು ಬೈಕ್ನಲ್ಲಿ ಸಾಗ್ತಿದ್ದ ಮುಸ್ಲಿಂ ಫ್ಯಾಮಿಲಿಯನ್ನ ದುಷ್ಕರ್ಮಿಗಳು ಅಡ್ಡಗಟ್ಟಿ ಬಲವಂತವಾಗಿ ಅವ್ರ ಮೇಲೆ ನೀರು ಮತ್ತು ಬಣ್ಣಗಳನ್ನ ಎರಚಿರೋ ಘಟನೆ ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಹೋಳಿ ಎರಚಿ ಮುಸ್ಲಿಂರಿಗೆ ಕಿರುಕುಳ ನೀಡಿರೋ ದುಷ್ಕರ್ಮಿಗಳು ʻಜೈ ಶ್ರೀರಾಮ್ʼ ಅಂತ ಘೋಷಣೆ ಕೂಗಿದ್ದಾರೆ. ಈ ಸಂಬಂಧ ಅಲ್ಲಿನ ಪೊಲೀಸರು ಒಬ್ಬರನ್ನ ಅರೆಸ್ಟ್ ಮಾಡಿದ್ದು, ಮೂವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
-masthmagaa.com
Contact Us for Advertisement