masthmagaa.com:
ಗುಜರಾತ್ನಲ್ಲಿರೊ ಸರ್ದಾರ್ ಸರೋವರ್ ಡ್ಯಾಂ ಯೋಜನೆಯನ್ನ ನಗರ ನಕ್ಸಲರು ವರ್ಷಗಟ್ಟಲೇ ತಡೆಹಿಡಿದಿದ್ರು ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ಈ ಯೋಜನೆ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಅಂತ ಕಾರಣ ಕೊಟ್ಟು ಯೋಜನೆಯನ್ನ ತಡೆಹಿಡಿಯಲಾಗಿತ್ತು. ಯೋಜನೆಯನ್ನ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೇ ಆರಂಭಿಸಲಾಗಿತ್ತು. ಇದಕ್ಕೆ ಪಂಡಿತ್ ಜವಾಹರಲಾಲ್ ನೆಹರೂ ಶಿಲಾನ್ಯಾಸ ಮಾಡಿದ್ರು. ಆದ್ರೆ ಅದು ನಾ ಬಂದ ಮೇಲೆ ಪೂರ್ಣಗೊಂಡಿದೆ. ಹಾಗೂ ಡ್ಯಾಂ ಇರೊ ಏಕ್ತಾ ನಗರ ಸ್ವಚ್ಛ ಪರಿಸರ ತೀರ್ಥಕ್ಷೇತ್ರ ಆಗಿದೆ. ಅವರ ಕಾರಣ ಎಷ್ಟು ಸುಳ್ಳಿನಿಂದ ತುಂಬಿತ್ತು ಅನ್ನೋದನ್ನ ನೀವೆ ಲೆಕ್ಕಹಾಕಿ ಅಂತ ಮೋದಿ ಹೇಳಿದ್ದಾರೆ. ಎಲ್ಲ ರಾಜ್ಯಗಳ ಪರಿಸರ ಸಚಿವರನ್ನ ಉದ್ದೇಶಿಸಿ ಮಾತಾಡಿದ ಪ್ರಧಾನಿ, ಪರಿಸರದ ಹೆಸರಿನಲ್ಲಿ ಯಾವುದೇ ಅಭಿವೃದ್ದಿ ಯೋಜನೆಗಳು ನಿಲ್ಲಬಾರ್ದು ಅಂತ ಹೇಳಿದ್ದಾರೆ.
-masthmagaa.com
Contact Us for Advertisement