masthmagaa.com;
ದೇಶದಲ್ಲಿ ಕೊರೋನಾ 2ನೇ ಅಲೆ ಅಂತ್ಯವಾಗಿ 3ನೇ ಅಲೆಯ ಅಪಾಯ ಎದುರಾಗಿದೆ. ದೇಶದ ಪ್ರಧಾನಿಯಿಂದ ಹಿಡಿದು ತಜ್ಞರವರೆಗೆ ಎಲ್ಲರೂ ಮಾಸ್ಕ್ ಹಾಕಿ ಮಾಸ್ಕ್ ಹಾಕಿ ಅಂತ ಬಡ್ಕೊಳ್ತಿದ್ದಾರೆ. ಆದ್ರೆ ಅದೇ ಬಿಜೆಪಿ ಸರ್ಕಾರ ಇರೋ ಉತ್ತರಾಖಂಡ್ನಲ್ಲಿ ಸಚಿವರು ಮಾಸ್ಕ್ ಹಾಕದೇ ಮೀಟಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲ.. ಅದ್ರಲ್ಲೂ ಓರ್ವ ಸಚಿವರಾದ ಯತೀಶ್ವರಾನಂದ ಸ್ವಾಮಿ ಕಾಲ್ ಮೇಲೆ ಕಾಲ್ ಹಾಕ್ಕೊಂಡು ಕಾಲಿನ ಹೆಬ್ಬೆರಳಲ್ಲಿ ಮಾಸ್ಕ್ ಸಿಕ್ಕಿಸಿದ್ದಾರೆ. ಏನ್ ಕೊಳಕು ಮನುಷ್ಯರೋ.. ಸಾಮಾನ್ಯ ಜನ ಆದ್ರೂನೂ ಮಾಸ್ಕ್ ಹಾಕದೇ ಇದ್ರೂ ಗಲ್ಲಕ್ಕೆ ಜಾರಿಸ್ಕೊಳ್ತಾರೆ. ಆದ್ರೆ ಈ ಸ್ವಾಮಿಗೆ ಮಾಸ್ಕ್ ಇಡೋಕೆ ದೇಹದಲ್ಲಿ ಸಿಕ್ಕಿದ್ದು ಇದೇ ಜಾಗ ಅನ್ಸುತ್ತೆ. ಮೀಟಿಂಗ್ ಮುಗಿದ ಬಳಿಕ ಇದೇ ಮಾಸ್ಕ್ ಹಾಕ್ಕೊಂಡು ಹೊರಗೆ ಹೋಗಿರಬಹುದು ಅಲ್ವಾ..
-masthmagaa.com
Contact Us for Advertisement