masthmagaa.com:
ರಾಷ್ಟ್ರ ರಾಜಧಾನಿ ದಿಲ್ಲಿ ಮೇಲಿನ ಅಧಿಕಾರ ಜಟಾಪಟಿಗೆ ಸಂಬಂಧಪಟ್ಟ ಪ್ರಕರಣವನ್ನ ಸುಪ್ರೀಂ ಕೋರ್ಟ್ ಈಗ ಮತ್ತೊಂದು ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ. ಇದ್ರಲ್ಲಿ ಸಿಜೆಐ ಎನ್.ವಿ ರಮಣ, ಜಸ್ಟೀಸ್ ಸೂರ್ಯ ಕಾಂತ್ ಮತ್ತು ಜಸ್ಟೀಸ್ ಹಿಮಾ ಕೊಹ್ಲಿ ಇರಲಿದ್ದಾರೆ. ಅಂದ್ಹಾಗೆ ಈ ಹಿಂದೆ 2018ರಲ್ಲಿ ನೇಮಿಸಿದ್ದ ಸಾಂವಿಧಾನಿಕ ಪೀಠವು ಬಹುತೇಕ ವಿಷಯಗಳನ್ನ ಚರ್ಚೆ ಮಾಡಿದ್ದು ಈಗ ಅಡ್ಮಿನಿಸ್ಟ್ರೇಟಿವ್ ಸರ್ವೀಸಸ್ಗೆ ಸಂಬಂಧಿಸಿದ ವಿಷಯವನ್ನ ಮಾತ್ರ ವಿಚಾರಣೆ ಮಾಡಲಿದೆ. ಇನ್ನು ಈ ವಿಚಾರಣೆ ಬುಧವಾರಕ್ಕೆ ಲಿಸ್ಟ್ ಆಗಿದ್ದು ಮತ್ತೆ ಮುಂದೂಡೋಕೆ ಕೇಳ್ಬೇಡಿ ಅಂತ ನ್ಯಾಯಾಲಯ ತಾಕೀತು ಮಾಡಿದೆ.
-masthmagaa.com
Contact Us for Advertisement