ಸೆಲ್ಫಿ ಕೊಡಿ ಸಾರ್ ಎಂದ ಅಭಿಮಾನಿ ವಿರುದ್ಧ ಡಿಕೆ ಕೆಂಡ!

masthmagaa.com:

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿ ವಿರುದ್ಧ ಡಿಕೆ ಶಿವಕುಮಾರ್ ಗರಂ ಆದ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ನಡೆದಿದೆ. ಡಿಕೆ ಶಿವಕುಮಾರ್ ಹೋಗ್ತಿದ್ದಾಗ ಪಕ್ಕದಲ್ಲಿ ಬಂದ ಅಭಿಮಾನಿಯೊಬ್ಬರು ತಮ್ಮ ಮೊಬೈಲ್​ ತೆಗೆದು ಡಿಕೆಶಿ ಮುಖದ ಮುಂದೆ ಹಿಡಿದಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಡಿಕೆ ಶಿವಕುಮಾರ್​, ಅವನಿಂದ ಮೊಬೈಲ್​​ ಕಿತ್ತುಕೊಳ್ಳಲು ಮುಂದಾಗ್ತಾರೆ. ಬಳಿಕ ಎಚ್ಚರಿಕೆ ಕೊಟ್ಟು ಕಳಿಸ್ತಾರೆ. ಈ ಹಿಂದೆ ಕೂಡ ಸೆಲ್ಫೀ ತೆಗೆದುಕೊಳ್ಳಲು ಹತ್ತಿರ ಬಂದ ವ್ಯಕ್ತಿಯೊಬ್ಬರಿಗೆ ಡಿಕೆಶಿ ಕಪಾಳಮೋಕ್ಷ ಮಾಡಿದ್ದರು. ಸೆಲ್ಫಿ ಅಂದ್ರೆ ಯಾಕೆ ಭಯ ಅಂತ ಇವತ್ತು ಕೇಳ್ದಾಗ ಮಾತನಾಡಿದ ಡಿಕೆ ಶಿವಕುಮಾರ್​, ಯಾರ ಕೈಯಲ್ಲಿ ಏನಿರುತ್ತೆ ಅಂತ ಯಾರಿಗೆ ಗೊತ್ತು. ರಾಜೀವ್​ ಗಾಂಧಿಗೆ ಏನಾಯ್ತು ಅಂತ ನಿಮಗೆಲ್ಲಾ ಗೊತ್ತು. ಕೆಲವೊಮ್ಮೆ ಸಿಟ್ಟು ಮತ್ತು ಭಾವನೆಗಳು ಹೊರಗೆ ಬರುತ್ತೆ. ಅದರೆಲ್ಲೇನು ತಪ್ಪಿಲ್ಲ ಎಂದಿದ್ದಾರೆ.

-masthmagaa.com

Contact Us for Advertisement

Leave a Reply