masthmagaa.com:
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್. ಸದ್ಯ ಈ ಕಾರ್ಯಕ್ರಮ 4 ಸೀಸನ್ ಮುಗಿಸಿ 5ನೇ ಸೀಸನ್ನತ್ತ ಹೊರಟಿದೆ. ಕಳೆದ 4 ಸೀಸನ್ಗಳನ್ನು ರಮೇಶ್ ಅರವಿಂದ ಅವರು ನಡೆಸಿಕೊಟ್ಟಿದ್ರು. 5ನೇ ಸೀಸನ್ನ್ನು ಸಹ ಅವರೇ ನಡೆಸಿಕೊಡಲಿದ್ದಾರೆ. 5ನೇ ಸೀಸನ್ಗೆ ಮೊದಲ ಅತಿಥಿಯಾಗಿ ರಿಷಬ್ ಶೆಟ್ಟಿ ಬರ್ತಾರೆ ಅನ್ನೋ ಸುದ್ದಿ ಎಲ್ಲಾಕಡೆ ಹಬ್ಬಿತ್ತು. ಆದರೆ ರಿಷಬ್ ಶೆಟ್ಟಿ ಬರ್ತಿಲ್ಲ ಅನ್ನೋದು ಕೂಡ ಕನ್ಫರ್ಮ್ ಆಗಿದೆ. ನಿನ್ನೆಯಿಂದ ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಚಿತ್ರೀಕರಣ ಶುರುವಾಗಿದ್ದು, ಮೊದಲನೇ ಅತಿಥಿಯಾಗಿ ಖ್ಯಾತ ನೃತ್ಯ ನಿರ್ದೇಶಕ, ನಿರ್ದೇಶಕ, ನಟ ಪ್ರಭುದೇವ ಆಗಮಿಸಿದ್ದಾರೆ. ನಿನ್ನೆ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದಲ್ಲಿ ಪ್ರಭುದೇವ ಪಾಲ್ಗೊಂಡಿದ್ದಾರೆ. ಪ್ರಭುದೇವ ಮೂಲತಃ ಮೈಸೂರಿನವರು. ಭಾರತೀಯ ಚಲನಚಿತ್ರರಂಗದ ನಟರಾಗಿ, ನರ್ತಕರಾಗಿ, ನಿರ್ದೇಶಕರಾಗಿ, ನೃತ್ಯ ಸಂಯೋಜಕರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಇವರಿಗೆ ಕಲೈಮಾಮಣಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ನಂದಿ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಫಿಲ್ಮ್ಫೇರ್ ಪ್ರಶಸ್ತಿಗಳು, ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್, ವಿಜಯ್ ಪ್ರಶಸ್ತಿಗಳು ಹೀಗೆ ಮುಂತಾದ ಪ್ರಶಸ್ತಿಗಳು ದೊರೆತಿದೆ. ಪ್ರಭುದೇವ ಅವರ ಬದುಕು ವರ್ಣರಂಜಿತವಾದದ್ದು. ಸಾಧನೆ ಮಾಡಿದ ಸಾಧಕರಿಗೆ ಈ ವೇದಿಕೆ ಇದೆ ಅನ್ನೋದನ್ನ ಪ್ರೂವ್ ಮಾಡೋಕೆ ಅಂತಾನೆ ಸೀಸನ್ 5ರಲ್ಲಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲ, ಸಾಮಾನ್ಯ ಸಾಧಕರಿಗೂ ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಕ್ರಿಕೆಟ್, ರಾಜಕಾರಣಿಗಳು, ಸಿನಿಮಾ, ಕಿರುತೆರೆ, ರಂಗಭೂಮಿ ಹೀಗೆ ಬೇರೆ ಬೇರೆ ಕ್ಷೇತ್ರಗಳ ಸಾಧಕರು ಈ ಬಾರಿ ವೀಕೆಂಡ್ ಕುರ್ಚಿಯ ಮೇಲೆ ಕೂತು, ತಮ್ಮ ಕಥೆಯನ್ನು ಹೇಳಿಕೊಳ್ಳಲಿದ್ದಾರೆ.
-masthmagaa.com
Contact Us for Advertisement