masthmagaa.com:
ಪಶ್ಚಿಮ ಬಂಗಾಳದ ಪುರ್ಬಾ ಪರ್ದಮಾನ್ ಜಿಲ್ಲೆಯಲ್ಲಿ ಟಿಎಂಸಿ ನಾಯಕನನ್ನು ಅವರ ತಂದೆಯ ಮುಂದೆಯೇ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. 40 ವರ್ಷದ ಚಂಚಲ್ ಭಕ್ಷಿ ಮೃತ ನಾಯಕ. ಇದ್ರ ಹಿಂದೆ ಬಿಜೆಪಿ ಕೈವಾಡ ಇದೆ ಅಂತ ಟಿಎಂಸಿ ಆರೋಪಿಸಿದೆ. ಇದ್ರ ಬೆನ್ನಲ್ಲೇ ಕೋಲ್ಕತ್ತಾದಲ್ಲಿ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಮನೆ ಕಡೆಗೆ ಮೂರು ಸ್ಫೋಟಕಗಳನ್ನು ಎಸೆಯಲಾಗಿದೆ. ಆದ್ರೆ ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿಯಾಗಿಲ್ಲ. ದಾಳಿ ವೇಳೆ ಅರ್ಜುನ್ ಸಿಂಗ್ ದೆಹಲಿಯಲ್ಲಿದ್ರು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೊ ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್, ಇದ್ರ ಹಿಂದೆ ಟಿ ಎಂ ಸಿ ಕೈವಾಡ ಇದೆ ಅಂತ ಹೇಳಿದೆ.
-masthmagaa.com
Contact Us for Advertisement