masthmagaa.com:
ಸಿಎಂ ಸಿದ್ದರಾಮಯ್ಯ ಅವ್ರ ಎದುರುಗಡೆ ಮನೆಯ ವ್ಯಕ್ತಿಯೊಬ್ರು ತಮ್ಮ ಮನೆ ಮುಂದೆ ವಾಹನಗಳನ್ನ ನಿಲ್ಲಿಸೋದ್ರಿಂದ ತೊಂದರೆಯಾಗ್ತಿದೆ ಅಂತ ಸಿದ್ದರಾಮಯ್ಯನವರ ಕಾರು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಭೇಟಿಗೆ ಬರುವ ವಾಹನಗಳು ನಮ್ಮ ಮನೆ ಮುಂದೆ ನಿಲ್ಲಿಸಿ ಹೋಗ್ತಾರೆ. ಹೇಗ್ ಬೇಕೋ ಹಾಗೇ ಪಾರ್ಕ್ ಮಾಡಿ ಹೋಗ್ತಾರೆ. ನಮ್ಮ ಮನೆಯ ವಾಹನಗಳಿಗೆ ತಿರುಗಾಡಲೂ ಅವಕಾಶ ಇಲ್ಲದಂತೆ ನಿಲ್ಲಿಸಿ ಹೋಗುತ್ತಾರೆ. ಈ ಬಗ್ಗೆ ಪೊಲೀಸರಿಗೆ ಹೇಳಿದ್ರೂ ಪ್ರಯೋಜನವಾಗಿಲ್ಲ ಅಂತ ಸಿಎಂ ಕಾರಿಗೆ ಅಡ್ಡಗಟ್ಟಿ ಸಿದ್ದರಾಮಯ್ಯ ಬಳಿ ದೂರು ನೀಡಿದ್ದಾರೆ. ಕಳೆದ 5 ವರ್ಷದಿಂದ ಹೀಗೆ ಆಗ್ತಿದ್ದು, ಇದನ್ನ ಸರಿಪಡಿಸಿ ಅಂತ ಮನವಿ ಮಾಡಿದ್ದಾರೆ.) ಹಿರಿಯ ನಾಗರಿಕರ ದೂರು ಆಲಿಸಿದ ಸಿಎಂ ಸಿದ್ದರಾಮಯ್ಯ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಸ್ಥಳದಲ್ಲಿದ್ದ ಸರಿಪಡಿಸುವಂತೆ ಸೂಚಿಸಿದ್ದಾರೆ.
ಇನ್ನು ಅತ್ತ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ವರುಣಾ ಕ್ಷೇತ್ರದ ಮತದಾರರಿಗೆ ಸಿದ್ದರಾಮಯ್ಯ ಆಮಿಷವೊಡ್ಡಿದ್ದಾರೆ, ಅವ್ರ ಆಯ್ಕೆಯನ್ನ ಅಸಿಂಧುಗೊಳಿಸಬೇಕು ಅನ್ನೋ ಅರ್ಜಿಯ ವಿಚಾರಣೆಯನ್ನ ಹೈಕೋರ್ಟ್ ಕೈಗೆತ್ತಿಕೊಂಡಿದ್ದು ಸಿದ್ದರಾಮಯ್ಯ ಅವ್ರಿಗೆ ನೋಟಿಸ್ ನೀಡಿದೆ. ನಿಯಮ 10ರಂತೆ ಸಿದ್ದರಾಮಯ್ಯ ನೋಟಿಸ್ ನೀಡಲಾಗಿದ್ದು, ಸೆಪ್ಟೆಂಬರ್ 1 ರೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ.
-masthmagaa.com
Contact Us for Advertisement