ನಾನ್‌ ಸೆನ್ಸ ರೀತಿ ಮಾತನಾಡೋದು ಯಾಕೆ..? ರಕ್ಷಿತ್‌ ಶೆಟ್ಟಿ ಪ್ರಶ್ನೆ…!

masthmagaa.com:

ಸಾವಿರಾರು ವರ್ಷ ಇತಿಹಾಸವಿರುವ ಉಡುಪಿ ದೇಗುಲದ ಕುರಿತಾಗಿ ಕರ್ನಾಟಕ ಕಾಂಗ್ರೇಸ್‌ ಪಕ್ಷದ ಮುಖಂಡ ಮಿಥುನ್‌ ರೈ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಮುಸ್ಲಿಮರು, ಉಡುಪಿ ದೇಗುಲಕ್ಕೆ ಜಾಗ ಕೊಟ್ಟಿದ್ದು ಎಂಬ ಮಿಥುನ್‌ ಹೇಳಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದರ ಕುರಿತಾಗಿ ಸಾಕಷ್ಟು ವಾದ ವಿವಾದಗಳು ಕೇಳಿ ಬಂದಿದ್ದವು. ಈ ಬಗ್ಗೆ ಸ್ವತಃ ಸ್ವಪಕ್ಷಿಯರೇ ತರಾಟೆಗೆ ತೆಗೆದುಕೊಂಡು ಸಾವಿರಾರು ವರ್ಷ ಇತಿಹಾಸವಿರುವ ದೇವಸ್ಥಾನದ ಬಗ್ಗೆ ತಿಳಿದುಕೊಂಡು ಮಾತನಾಡಿ ಎಂದು ಮಿಥುನ್‌ ಕಿವಿಹಿಂಡಿದ್ದರು. ಈ ಪ್ರಕರಣದ ಕುರಿತು ಈಗ ನಟ ರಕ್ಷಿತ್‌ ಶೆಟ್ಟಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಮಿಥುನ್‌ ರೈ ಹೆಸರನ್ನು ಬಳಸದೇ ತರಾಟೆಗೆ ತೆಗೆದುಕೊಂಡಿದ್ದಾರೆ. ʼಉಡುಪಿ ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ. ಮಾಹಿತಿ ಗೊತ್ತಿಲ್ಲದೇ ಸಾರ್ವಜನಿಕವಾಗಿ ನಾನ್‌ ಸೆನ್ಸ್‌ ರೀತಿ ಮಾತಾಡುವುದು ಯಾಕೆ? ಅಂತ ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply