ಒಳ್ಳೆಯ ರೀತಿಯಲ್ಲಿ ಬದುಕ್ತೀನಿ: ಆರ್ಯನ್ ಖಾನ್ ಭರವಸೆ

masthmagaa.com:

ಜೈಲಿಂದ ಹೊರಬಂದ ಬಳಿಕ ಒಳ್ಳೆ ರೀತಿಲಿ ಬದುಕ್ತೀನಿ ಅಂತ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಹೇಳಿದ್ದಾರೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಎನ್​ಸಿಬಿ ವಶದಲ್ಲಿದ್ದಾಗ ಆರ್ಯನ್ ಖಾನ್​ರ ಕೌನ್ಸಿಲಿಂಗ್ ನಡೆಸಲಾಗಿತ್ತು. ಈ ವೇಳೆ ಆರ್ಯನ್ ಖಾನ್​, ಇನ್ಮುಂದೆ ನಾನು ಸಮಾಜದಲ್ಲಿ ಉತ್ತಮ ನಾಯಕನಾಗಿ ಬದುಕ್ತೀನಿ. ಬಡವರಿಗೆ ಸಹಾಯ ಮಾಡ್ತೀನಿ. ಮುಂದೆ ಒಂದಿನ ನೀವೇ ಹೆಮ್ಮೆ ಪಡಬೇಕು.. ಆ ರೀತಿಯಲ್ಲಿ ಬದುಕ್ತೀನಿ ಅಂತ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೇಡೆಗೆ ಮಾತು ಕೊಟ್ಟಿದ್ದಾರೆ ಅಂತ ಗೊತ್ತಾಗಿದೆ. ಅಂದಹಾಗೆ ಸದ್ಯ ಮಾದಕ ವಸ್ತು ಸೇವನೆ ಸಂಬಂಧ ಆರ್ಥರ್ ರೋಡ್​​ನ ಜೈಲಿನಲ್ಲಿರೋ ಆರ್ಯನ್ ಖಾನ್​​​​ರ ಜಾಮೀನು ಕುರಿತ ತೀರ್ಪು ಅಕ್ಟೋಬರ್ 20ರಂದು ಹೊರಬೀಳಲಿದೆ.

-masthmagaa.com

Contact Us for Advertisement

Leave a Reply