masthmagaa.com:
ಜೈಲಿಂದ ಹೊರಬಂದ ಬಳಿಕ ಒಳ್ಳೆ ರೀತಿಲಿ ಬದುಕ್ತೀನಿ ಅಂತ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಹೇಳಿದ್ದಾರೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಎನ್ಸಿಬಿ ವಶದಲ್ಲಿದ್ದಾಗ ಆರ್ಯನ್ ಖಾನ್ರ ಕೌನ್ಸಿಲಿಂಗ್ ನಡೆಸಲಾಗಿತ್ತು. ಈ ವೇಳೆ ಆರ್ಯನ್ ಖಾನ್, ಇನ್ಮುಂದೆ ನಾನು ಸಮಾಜದಲ್ಲಿ ಉತ್ತಮ ನಾಯಕನಾಗಿ ಬದುಕ್ತೀನಿ. ಬಡವರಿಗೆ ಸಹಾಯ ಮಾಡ್ತೀನಿ. ಮುಂದೆ ಒಂದಿನ ನೀವೇ ಹೆಮ್ಮೆ ಪಡಬೇಕು.. ಆ ರೀತಿಯಲ್ಲಿ ಬದುಕ್ತೀನಿ ಅಂತ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೇಡೆಗೆ ಮಾತು ಕೊಟ್ಟಿದ್ದಾರೆ ಅಂತ ಗೊತ್ತಾಗಿದೆ. ಅಂದಹಾಗೆ ಸದ್ಯ ಮಾದಕ ವಸ್ತು ಸೇವನೆ ಸಂಬಂಧ ಆರ್ಥರ್ ರೋಡ್ನ ಜೈಲಿನಲ್ಲಿರೋ ಆರ್ಯನ್ ಖಾನ್ರ ಜಾಮೀನು ಕುರಿತ ತೀರ್ಪು ಅಕ್ಟೋಬರ್ 20ರಂದು ಹೊರಬೀಳಲಿದೆ.
-masthmagaa.com
Contact Us for Advertisement