masthmagaa.com:
‘ಹೈದರಾಬಾದ್ ಮಹಾ ನಗರ ಪಾಲಿಕೆ (GHMC) ಚುನಾವಣೆಯಲ್ಲಿ ನಾವು ಗೆದ್ದ ಬಳಿಕ ಹೈದರಾಬಾದ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡ್ತೀವಿ’ ಅಂತ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ‘ಟಿಆರ್ಎಸ್ ಮತ್ತು ಎಐಎಂಐಎಂ ಪಕ್ಷಗಳು ರೊಹಿಂಗ್ಯಾ, ಪಾಕಿಸ್ತಾನಿ ಮತ್ತು ಅಫ್ಘನಿಸ್ತಾನಿ ಮತದಾರರಿಂದ GHMC ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಿವೆ. ಈ ಚುನಾವಣೆಯಲ್ಲಿ ಪಾಕಿಸ್ತಾನ, ಅಫ್ಘನಿಸ್ತಾನ ಮತ್ತು ರೊಹಿಂಗ್ಯಾಗಳಿಗೆ ಮತದಾನ ಮಾಡಲು ಬಿಡಬಾರದು. ನಾವು ಈ ಚುನಾವಣೆ ಗೆದ್ದ ಬಳಿಕ ಹೈದರಾಬಾದ್ ಓಲ್ಡ್ ಸಿಟಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡ್ತೀವಿ’ ಅಂತ ಹೇಳಿದ್ದಾರೆ. ಅಂದ್ಹಾಗೆ ಹೈದರಾಬಾದ್ ಓಲ್ಡ್ ಸಿಟಿ ಮುಸ್ಲಿಂ ಸಮುದಾಯದವರು ಹೆಚ್ಚಿರುವ ಪ್ರದೇಶವಾಗಿದೆ.
ಬಿಜೆಪಿ ನಾಯಕನ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಎಐಎಂಐಎಂ ಸಂಸದ ಅಸಾದುದ್ದಿನ್ ಓವೈಸಿ, ‘ಮೊದಲು ಚೀನಾದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ, ಆಮೇಲೆ ಹೈದರಾಬಾದ್ಗೆ ಬನ್ನಿ’ ಅಂತ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಇತ್ತೀಚೆಗೆ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಕೂಡ ವಿವಾದಾತ್ಮಕ ಹೇಳಿಕೆಗಳನ್ನ ಕೊಟ್ಟಿದ್ದರು. ‘ಓವೈಸಿಗೆ ಬೀಳುವ ಪ್ರತಿಯೊಂದು ಮತವೂ ಭಾರತ ವಿರೋಧಿ’ ಅಂತ ಹೇಳಿದ್ದರು. ಅಲ್ಲದೆ ಹೈದರಾಬಾದ್ ಅನ್ನು ‘ಭಾಗ್ಯನಗರ’ ಅಂತ ಕರೆದಿದ್ದರು. ಇದರಿಂದ ಟ್ರೋಲ್ಗೂ ಗುರಿಯಾಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಓವೈಸಿ, ‘ಈ ಚುನಾವಣೆ ಹೈದರಾಬಾದ್ ಮತ್ತು ಭಾಗ್ಯನಗರಗಳ ನಡುವಿನ ಫೈಟ್. ಇದು ಹೈದರಾಬಾದೋ ಅಥವಾ ಭಾಗ್ಯನಗರವೋ ಅನ್ನೋದನ್ನ ನಿರ್ಧರಿಸುವ ಜವಾಬ್ದಾರಿ ಈಗ ಜನರ ಕೈಯಲ್ಲಿದೆ’ ಅಂತ ಹೇಳಿದ್ದರು.
-masthmagaa.com
Contact Us for Advertisement