masthmagaa.com:
ಇಸ್ರೇಲ್ ಮೂಲದ ಎನ್ಎಸ್ಒ ಗ್ರೂಪ್ ಅಭಿವೃದ್ಧಿಪಡಿಸಿದ ಪೆಗಸಸ್ ಸಾಫ್ಟ್ವೇರ್ ಮೂಲಕ ಪತ್ರಕರ್ತರು, ವಿರೋಧ ಪಕ್ಷದ ನಾಯಕರು, ಮಾನವ ಹಕ್ಕು ಹೋರಾಟಗಾರರು ಸೇರಿದಂತೆ ಹಲವರ ಮೇಲೆ ರಹಸ್ಯವಾಗಿ ಕಣ್ಣಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೀಬೇಕು ಅಂತ ವಿಪಕ್ಷಗಳು ಆಗ್ರಹಿಸಿವೆ. ಯಾರ್ಯಾರು ಏನೇನ್ ಹೇಳಿದ್ದಾರೆ ಅಂತ ಕ್ವಿಕ್ ಆಗಿ ನೋಡಣ..
ನಮ್ಮ ಫೋನ್ಗಳನ್ನ ಟ್ರಾಪ್ ಮಾಡಿದ್ದಾರೆ. ಹೀಗಾಗಿ ನನ್ನ ಫೋನ್ ಅನ್ನೇ ಬಂದ್ ಮಾಡಿ ಇಟ್ಟಿದ್ದೀನಿ. ನಾವು ಕೇಂದ್ರ ಸರ್ಕಾರವನ್ನ ಕೂಡ ಬಂದ್ ಮಾಡ್ಬೇಕು. ಇಲ್ಲದಿದ್ರೆ ದೇಶ ಹಾಳಾಗುತ್ತೆ.
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ
ಪ್ರಧಾನಿ ಮೋದಿ 2017ರಲ್ಲಿ ಇಸ್ರೇಲ್ ಪ್ರವಾಸ ಹೋಗಿದ್ದರು. ಅದಾದ ಬಳಿಕವೇ ಫೋನ್ ಟ್ರಾಪ್ ಆಗಲು ಶುರುವಾಗಿದೆ.
– ಕಮಲ್ನಾಥ್, ಮಾಜಿ ಮಧ್ಯಪ್ರದೇಶ ಸಿಎಂ
NSO ಗ್ರೂಪ್ನ ಅಧಿಕಾರಿಗಳು ಈ ಹಿಂದೆ ಛತ್ತೀಸ್ಗಢಕ್ಕೆ ಬಂದು ಕೆಲವರನ್ನ ಭೇಟಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನ ರಚಿಸಿದ್ದೇವೆ. ಪೆಗಸಸ್ ಸಾಫ್ಟ್ವೇರ್ ಅನ್ನ ಸರ್ಕಾರಗಳಿಗೆ ಮಾತ್ರ ಕೊಡೋದು ಅಂತ NSO ಗ್ರೂಪ್ ಹೇಳಿದೆ. ಹೀಗಾಗಿ ಸರ್ಕಾರ ಈ ಡೀಲ್ ಮಾಡ್ಕೊಂಡಿದ್ಯಾ, ಇಲ್ವಾ ಅನ್ನೋದನ್ನ ಹೇಳಬೇಕು.
– ಭೂಪೇಶ್ ಭಗೇಲ್, ಛತ್ತೀಸ್ಗಢ ಸಿಎಂ
ನಮ್ಮ ಬಳಿ ಮುಚ್ಚಿಡಲು ಏನೂ ಇಲ್ಲ ಅಂತಾದ್ರೆ ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿಗೆ ಪತ್ರ ಬರೆಯಬೇಕು. ಈ ಮೂಲಕ ಪೆಗಸಸ್ ಪ್ರಾಜೆಕ್ಟ್ಗೆ ಯಾರು ದುಡ್ಡು ಕೊಟ್ಟಿದ್ದಾರೆ ಅನ್ನೋದನ್ನ ಪತ್ತೆಹಚ್ಚಬೇಕು.
– ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ರಾಜ್ಯಸಭಾ ಸದಸ್ಯ
ಭಾರತದ ವಿರುದ್ಧ ವಿದೇಶಿ ಮಾಧ್ಯಮಗಳು ಸೇರಿ ಮಾಡಿದ ತಪ್ಪು ಮಾಹಿತಿಯ ಅಭಿಯಾನ ಇದು ಎನ್ನಲಾಗ್ತಿದೆ. ಈ ಹಿಂದೆ ಕೂಡ ಸ್ವಿಸ್ ಬ್ಯಾಂಕ್ ಅಕೌಂಟ್ಗಳಿಗೆ ಸಂಬಂಧಿಸಿದಂತೆ ಇಂಥಾ ಅಭಿಯಾನ ಮಾಡಲಾಗಿತ್ತು. ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನ ಬಳಸಿಕೊಂಡು ಅವರು ವಿವಿಧ ದೇಶಗಳನ್ನ ಅಸ್ಥಿರಗೊಳಿಸಲು ಪ್ರಯತ್ನ ಪಡ್ತಿದ್ದಾರೆ. ಭಾರತ ಈಗ ಶಕ್ತಿಶಾಲಿಯಾಗಿ ಬೆಳೆಯುತ್ತಿರೋದ್ರಿಂದ ಅವರ ಕಣ್ಣು ಈಗ ಭಾರತದ ಮೇಲೆ ನೆಟ್ಟಿದೆ.
– ಬಸವರಾಜ ಬೊಮ್ಮಾಯಿ, ಕರ್ನಾಟಕ ಗೃಹ ಸಚಿವ
-masthmagaa.com
Contact Us for Advertisement