masthmagaa.com:
ದೇವಸ್ಥಾನದ ಪ್ರಸಾದ ತಿಂದು ಅಸ್ವಸ್ಥರಾಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ಮಹಿಳೆಯೊಬ್ರು ಮೃತಪಟ್ಟಿರೋ ಘಟನೆ ಬೆಂಗಳೂರಿನ ಹೊಸಕೋಟೆಯಲ್ಲಿ ನಡೆದಿದೆ. ಹೊಸಕೋಟೆಯ ಕಾವೇರಿ ನಗರದ 60 ವರ್ಷದ ಸಿದ್ದಗಂಗಮ್ಮ ಅನ್ನೋ ಮಹಿಳೆ ಪ್ರಸಾದ ಸೇವಿಸಿ ಮೃತಪಟ್ಟಿದ್ದಾರೆ. ಹನುಮ ಜಯಂತಿ ಹಿನ್ನಲೆಯಲ್ಲಿ ಹೊಸಕೋಟೆಯ ವೆಂಕಟರಮಣಸ್ವಾಮಿ, ಊರುಬಾಗಿಲು ಆಂಜನೇಯ, ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಬಂದ ಭಕ್ತರಿಗೆ ಪುಳಿಯೋಗರೆ, ಪಾಯಸ ಮತ್ತು ಲಡ್ಡು ಪ್ರಸಾದ ಕೊಡಲಾಗಿತ್ತು. ಇದನ್ನ ತಿಂದ 100ಕ್ಕೂ ಹೆಚ್ಚು ಭಕ್ತರಿಗೆ ರಾತ್ರಿಯಿಂದ ವಾಂತಿ, ಭೇದಿ ಶುರುವಾಗಿ ಅಸ್ವಸ್ಥಗೊಂಡಿದ್ರು. ಇವ್ರೆಲ್ಲರನ್ನ ಹೊಸಕೋಟೆ, ಕೋಲಾರ, ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಈ ಪೈಕಿ 22ಕ್ಕೂ ಅಧಿಕ ಜನರ ಸ್ಥಿತಿ ಸೀರಿಯಸ್ ಆಗಿದ್ದು, ICUನಲ್ಲಿ ಟ್ರೀಟ್ಮೆಂಟ್ ನೀಡಲಾಗ್ತಿದೆ. ಆದ್ರೆ ಸಿದ್ದಗಂಗಮ್ಮ ಅವ್ರಿಗೆ ನೀಡಿರೋ ಚಿಕಿತ್ಸೆ ಫಲಕಾರಿ ಆಗ್ದೇ ಮೃತಪಟ್ಟಿದ್ದಾರೆ.
-masthmagaa.com
Contact Us for Advertisement