ಅಧಿವೇಶನಕ್ಕೆ ಮಾಧ್ಯಮಗಳ ಕ್ಯಾಮರಾ ನಿರ್ಬಂಧ ವಾಪಸ್..!

ಬೆಂಗಳೂರು: ಮಾಧ್ಯಮಗಳ ಕ್ಯಾಮರಾ ಮೇಲಿನ ನಿರ್ಬಂಧವನ್ನು ತೆಗೆದು ಹಾಕೋದಾಗಿ ಸಿಎಂ ಯಡಿಯೂರಪ್ಪ ಹೇಳಿದ್ಧಾರೆ. ಬಿಜೆಪಿ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಇವತ್ತು ಯಡಿಯೂರಪ್ಪ ಮಾಧ್ಯಮ ಸಂವಾದ ನಡೆಸಿದ್ರು. ಈ ವೇಳೆ ವಿಧಾನಸಭೆಗೆ ಮಾಧ್ಯಮಗಳ ಕ್ಯಾಮೆರಾ ನಿರ್ಬಂಧದ ಬಗ್ಗೆ ಮಾತನಾಡಿದ ಅವರು, ಮಾಧ್ಯಮಗಳ ಮೇಲೆ ಹೇರಿರೋ ನಿರ್ಬಂಧವನ್ನು ತೆಗೆಯಲಾಗುತ್ತೆ. ಮುಂದಿನ ಅಧಿವೇಶನದೊಳಗೆ ಮೊದಲು ಹೇಗೆ ವ್ಯವಸ್ಥೆ ಇತ್ತೋ ಅದೇ ರೀತಿ ಆಗುತ್ತದೆ. ಯಡಿಯೂರಪ್ಪ ಒಮ್ಮೆ ಹೇಳಿದ್ರೆ ಮುಗೀತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜೊತೆ ನಾನೇ ಮಾತನಾಡುತ್ತೇನೆ. ಎಲ್ಲವನ್ನೂ ಸರಿಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಕಳೆದ ವಿಧಾನಸಭೆ ಅಧಿವೇಶನಕ್ಕೆ ಮಾಧ್ಯಮಗಳ ಕ್ಯಾಮರಾಗೆ ನಿರ್ಬಂಧ ವಿಧಿಸಲಾಗಿತ್ತು. ಕೇವಲ ಪತ್ರಕರ್ತರು ಮಾತ್ರವೇ ವಿಧಾನಸಭೆ ಅಧಿವೇಶನದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿತ್ತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಈ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.

Contact Us for Advertisement

Leave a Reply