masthmagaa.com:

ಬಾಲಿವುಡ್ ನಟಿ ಕಂಗನಾ ರನಾವತ್ ಅವರ ಕಚೇರಿಯನ್ನು ಭಾಗಶಃ ನೆಲಸಮ ಮಾಡಿದ ಮುಂಬೈ ಮಹಾನಗರ ಪಾಲಿಕೆ ಮತ್ತು ಮಹಾರಾಷ್ಟ್ರ ಸರ್ಕಾರ ವಿರುದ್ಧ ಸಾಕಷ್ಟು ಆಕ್ರೋಶ ಕೇಳಿ ಬರ್ತಿದೆ. ಡ್ರಗ್ ಮಾಫಿಯಾ ಮತ್ತು ಮಹಾರಾಷ್ಟ್ರ ಸರ್ಕಾರ ವಿರುದ್ಧ ಕಂಗನಾ ಮಾತಾಡಿದ್ದಕ್ಕಾಗಿಯೇ ಈ ರೀತಿ ಮಾಡಲಾಗಿದೆ ಅನ್ನೋ ಆರೋಪ ಕೂಡ ಇದೆ.

ಇದರ ನಡುವೆ ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿರುವ ಮಹಾರಾಷ್ಟ್ರ ಮಾಜಿ ಸಿಎಂ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನಾವಿಸ್, ‘ಅಂಡರ್​ವರ್ಲ್ಡ್​ ಡಾನ್ ದಾವೂದ್ ಇಬ್ರಾಹಿಂನ ಮನೆಯನ್ನು ಕೆಡವಲು ನಿಮ್ಮಿಂದ ಸಾಧ್ಯವಿಲ್ಲ. ಆದ್ರೆ ಕಂಗಾನಾಳ ಕಚೇರಿಯನ್ನು ಕೆಡವಿದ್ದೀರಿ’ ಅಂತ ಕಿಡಿಕಾರಿದ್ದಾರೆ.

ಇನ್ನು ಕಂಗನಾ ಕಚೇರಿ ಪಕ್ಕದಲ್ಲೇ ಫ್ಯಾಶನ್​ ಡಿಸೈನರ್​ ಮನೀಶ್ ಮಲ್ಹೋತ್ರಾ ಕಚೇರಿ ಕೂಡ ಇದೆ. ಮನೀಶ್ ಮಲ್ಹೋತ್ರಾಗೆ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಿ 7 ದಿನ ಸಮಯ ಕೊಟ್ಟಿದ್ದಾರೆ. ಆದ್ರೆ ಕಂಗನಾಗೆ ಕೇವಲ 24 ಗಂಟೆಗಳ ಕಾಲಾವಕಾಶ ಕೊಟ್ಟಿರೋದು ಕಂಗನಾ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಮತ್ತೊಂದುಕಡೆ ಮಹಾರಾಷ್ಟ್ರ ರಾಜ್ಯಪಾಲರನ್ನು ಇವತ್ತು ಭೇಟಿಯಾಗಿರುವ ಕೇಂದ್ರ ಸಚಿವ ರಾಮ್​ದಾಸ್ ಅಠಾವಳೆ, ಕಂಗನಾಳ ಕಚೇರಿ ಕೆಡವಿದ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಆಗಿರುವ ನಷ್ಟಕ್ಕೆ ಪರಿಹಾರ ಕೊಡಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ.

https://twitter.com/VeereshMalik/status/1304062679263268865

-masthmagaa.com

Contact Us for Advertisement

Leave a Reply