ಜಾತಿ ನಿಂದನೆ ಕೇಸ್‌ ಹಾಕಿದ್ದಕ್ಕೆ ಹೆದರಿ ಆತ್ಮಹತ್ಯೆ ಮಾಡ್ಕೊಂಡ ಯುವಕ!

masthmagaa.com:

ಜಾತಿ ನಿಂದನೆ ಕೇಸ್‌ ಹಾಕಿದ್ದಕ್ಕೆ ಹೆದರಿ ಯುವಕನೊಬ್ಬ ಆತ್ಮಹತ್ಯೆ ಮಾಡ್ಕೊಂಡಿರೊ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಅಲ್ಲಿನ ಕಮಲಾಪುರ ತಾಲೂಕಿನ ಲಾಡಮುಗಳಿಯಲ್ಲಿ 23 ವಯಸ್ಸಿನ ಯುವಕ ನಿಖಿಲ್ ಪೂಜಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 4 ದಿನ ಹಿಂದೆ ಜಾತ್ರೆ ನಡೆದು ಕ್ಷುಲ್ಲಕ ವಿಚಾರಕ್ಕೆ ಎರಡು ಸಮುದಾಯಗಳ ಯುವಕರ ಮಧ್ಯೆ ಗಲಾಟೆ ನಡೆದಿತ್ತು. ಆಗ ನಿಖಿಲ್‌ ಸೇರಿದಂತೆ ಅನೇಕರ ಮೇಲೆ ಜಾತಿ ನಿಂದನೆ ಕೇಸ್‌ ದಾಖಲಾಗಿತ್ತು.ಈಗ ಹೆದರಿ ಆತ್ಮಹತ್ಯೆ ಮಾಡ್ಕೊಂಡಿದಾರೆ ಅಂತ ಮಾಹಿತಿ ಸಿಕ್ತಿದೆ.

-masthmagaa.com

Contact Us for Advertisement

Leave a Reply