ಬಾಬಾ ರಾಮ್​ದೇವ್ ವಿರುದ್ಧ ವೈದ್ಯರ ಕರಾಳ ದಿನಾಚರಣೆ!

masthmagaa.com:

ಅಲೋಪತಿ ಬಗ್ಗೆ ಬಾಯಿಗೆ ಬಂದಂಗೆ ಮಾತಾಡಿದ್ದ ಬಾಬಾ ರಾಮ್‌ ದೇವ್‌ ವಿರುದ್ಧ ವೈದ್ಯರ ಸಿಟ್ಟು ಕಮ್ಮಿಯಾಗೋ ಲಕ್ಷಣ ಕಾಣ್ತಿಲ್ಲ.. ದೇಶದಾದ್ಯಂತ ವೈದ್ಯರು ಕರಾಳ ದಿನ ಆಚರಿಸಿದ್ದಾರೆ. ರಾಜ್ಯದಲ್ಲೂ ವೈದ್ಯರು ಕಪ್ಪು ಪಟ್ಟಿ ಧರಿಸೋ ಮೂಲಕ, ವಾಟ್ಸಾಪ್​​ನಲ್ಲಿ ಕಪ್ಪು ಚಿತ್ರವನ್ನು ಹಾಕೋ ಮೂಲಕ ಪ್ರತಿಭಟಿಸಿದ್ದಾರೆ. ಅರೆಸ್ಟ್​ ಕ್ವಾಕ್​​​ ರಾಮ್​ದೇವ್​​, ಬ್ಲಾಕ್​ಡೇ ಹ್ಯಾಶ್ ಟ್ಯಾಗ್​​ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡ್ ಆಗಿತ್ತು. ಈ ನಡುವೆ ಪತಂಜಲಿ ಆಯುರ್ವೇದದ ಆಚಾರ್ಯ ಬಾಲಕೃಷ್ಣ ಆಸ್ಪತ್ರೆಯಲ್ಲಿ ಮಲಗಿರೋ ವಿಡಿಯೋವೊಂದು ವೈರಲ್ ಆಗ್ತಿದ್ದು, ಬಾಲಕೃಷ್ಣಗೆ ಹೃದಯಾಘಾತವಾದಾಗ ಸೀದಾ ಏಮ್ಸ್ ಆಸ್ಪತ್ರೆ ಕರ್ಕೊಂಡು ಓಡಿದ್ರು. ಈಗ ಅದೇ ಅಲೋಪತಿಯ ಬಗ್ಗೆ ವ್ಯಂಗ್ಯ ಮಾಡ್ತಿದ್ದಾರೆ ಇದು ನಾಚಿಕೆಗೇಡಿನ ವಿಷಯ ಅಂತ ವಿಡಿಯೋದಲ್ಲಿ ಟೀಕಿಸಲಾಗಿದೆ. ಅಂದಹಾಗೆ ಆ ವಿಡಿಯೋ 2019ರಲ್ಲಿ ಬಾಲಕೃಷ್ಣಗೆ ಫುಡ್ ಪಾಯ್ಸನ್ ಆದಾಗ ರಿಷಿಕೇಶ್​​ನಲ್ಲಿರೋ ಏಮ್ಸ್​​ಗೆ ದಾಖಲಿಸಲಾಗಿತ್ತು. ಆಗಿನ ವಿಡಿಯೋ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply