ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಪಶ್ಚಿಮ ಬಂಗಾಳದ ಐವರ ಹತ್ಯೆ

ಜಮ್ಮು ಕಾಶ್ಮೀರದ ಕುಲ್ಗಾಮ್​ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ನಿನ್ನೆ ನಡೆದ ದಾಳಿಯಲ್ಲಿ ಐವರು ಕಾರ್ಮಿಕರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತರೆಲ್ಲರೂ ಪಶ್ಚಿಮ ಬಂಗಾಳದವರು ಅಂತ ತಿಳಿದುಬಂದಿದೆ.

ಮೊನ್ನೆಯಷ್ಟೇ ಉಗ್ರರು ಟ್ರಕ್ ಡ್ರೈವರ್​​ನನ್ನು ಗುಂಡಿಟ್ಟುಕೊಂದಿದ್ದರು. ಅದಕ್ಕೂ ಮುನ್ನ ಬಸ್​ ಸ್ಟಾಂಡ್​ನಲ್ಲಿ ಬಸ್ ಕಾಯುತ್ತಿದ್ದವರ ಮೇಲೆ ಗ್ರೆನೇಡ್ ದಾಳಿ ನಡೆಸಿ, ಹಲವರು ಗಾಯಗೊಂಡಿದ್ದರು. ಇನ್ನು ನಿನ್ನೆ ಪುಲ್ವಾಮಾದಲ್ಲಿ ಸ್ಕೂಲ್ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಸಿಆರ್​ಪಿಎಫ್ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು.

ಇನ್ನು ಮೃತರೆಲ್ಲರೂ ಪಶ್ಚಿಮ ಬಂಗಾಳದ ಮುರ್ಷಿದಾಬಾದ್​​ನ ಸಾಗರ್​​ಡಿಘಿಯವರು ಎಂದು ತಿಳಿದು ಬಂದಿದೆ. ಮೃತರ ಪೈಕಿ ಮೂವರ ಗುರುತು ಪತ್ತೆಯಾಗಿದ್ದು, ಶೇಖ್ ಕಮರುದ್ದಿನ್, ಶೇಖ್ ಮೊಹ್ಮದ್ ರಫೀಕ್, ಶೇಖ್ ಮುರ್ನುಸುಲಿನ್ ಎಂದು ತಿಳಿದುಬಂದಿದೆ. ಇನ್ನು ಘಟನೆಯಲ್ಲಿ ಝಹೂರುದ್ದೀನ್ ಎಂಬಾತ ಗಾಯಗೊಂಡಿದ್ದು, ಅನಂತ್​ನಾಗ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Contact Us for Advertisement

Leave a Reply