masthmagaa.com:
ಹೈದರಾಬಾದ್ನ ಸೈದಾಬಾದ್ನಲ್ಲಿ 6 ವರ್ಷದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಮುಖ್ಯ ಆರೋಪಿ 30 ವರ್ಷದ ಪಲ್ಲಕೊಂಡ ರಾಜು ತಲೆಗೆ ಬಹುಮಾನ ಘೋಷಿಸಲಾಗಿದೆ. ಈತನ ಬಂಧನಕ್ಕೆ ಹೆಲ್ಪ್ ಆಗೋ ಥರ ಮಾಹಿತಿ ಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ ಕೊಡ್ತಿವಿ ಅಂತ ತೆಲಂಗಾಣ ಸರ್ಕಾರ ಅನೌನ್ಸ್ ಮಾಡಿದೆ. ಈ ಪ್ರಕರಣ ಸಂಬಂಧ ಇಡೀ ತೆಲಂಗಾಣ ರೊಚ್ಚಿಗೆದ್ದಿದೆ. ದೇಶ ಮಟ್ಟದಲ್ಲಿ ಬಹಳ ದೊಡ್ಡ ಸುದ್ದಿಯಾಗ್ತಿದೆ. ಹೀಗಾಗಿ ತೆಲಂಗಾಣ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲೇಬಾಕಾದ ಒತ್ತಡದಲ್ಲಿದೆ. ಇದಕ್ಕೆ ತೆಲಂಗಾಣ ಸರ್ಕಾರದ ಸಚಿವ ಚಾಮಕುರ ಮಲ್ಲರೆಡ್ಡಿ ಹೇಳಿಕೆಯೇ ಸಾಕ್ಷಿ. ನಾವು ಆರೋಪಿಯನ್ನ ಹುಡಕಿ ಎನ್ ಕೌಂಟರ್ ಮಾಡುತ್ತೇವೆ . ಬಿಡೋದಿಲ್ಲ.. ಅಂತ ಸಾರ್ವಜನಿಕ ಹೇಳಿಕೆ ಕೊಟ್ಟಿದ್ದಾರೆ ಅವ್ರು. ಈ ಹಿಂದೆ ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಕೇಸಲ್ಲೂ ತೆಲಂಗಾಣ ಪೊಲೀಸರು ಎನ್ಕೌಂಟರ್ ಮಾಡಿ ಅಷ್ಟೂ ಆರೋಪಿಗಳನ್ನ ಒಂದೇ ಏಟಲ್ಲಿ ಮುಗಿಸಿದ್ದರು ಅನ್ನೋದನ್ನ ಇಲ್ಲಿ ನೆನಪು ಮಾಡಿಕೊಳ್ಳಬಹುದು.
-masthmagaa.com
Contact Us for Advertisement