masthmagaa.com
ದೆಹಲಿ: ಎನ್ಪಿಆರ್ ಮತ್ತು ಎನ್ಆರ್ಸಿ ವಿರುದ್ಧ ದೆಹಲಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಅಲ್ಲದೆ ದೆಹಲಿ ಸರ್ಕಾರದ 70 ಮಂದಿ ಶಾಸಕರ ಪೈಕಿ 61 ಶಾಸಕರ ಬಳಿ ಜನನ ಪ್ರಮಾಣ ಪತ್ರವೇ ಇಲ್ಲ ಅನ್ನೋದು ತಿಳಿದುಬಂದಿದೆ. ಅಂದ್ರೆ ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್, ನಾನು, ನನ್ನ ಹೆಂಡತಿ ಮತ್ತು ಇಡೀ ಕ್ಯಾಬಿನೆಟ್ ಸದಸ್ಯರ ಬಳಿ ಜನನ ಪ್ರಮಾಣ ಪತ್ರವಿಲ್ಲ. ನಮ್ಮನ್ನು ಡಿಟೆನ್ಷನ್ ಸೆಂಟರ್ಗೆ ಕಳುಹಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ ದೆಹಲಿ ವಿಧಾನಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾರ್ಯಾರ ಬಳಿ ಜನನ ಪ್ರಮಾಣ ಪತ್ರ ಇದೆ ಕೈ ಎತ್ತಿ ನೋಡೋಣ ಎಂದಿದ್ದಾರೆ. ಈ ವೇಳೆ 61 ಮಂದಿ ಶಾಸಕರು ಕೈ ಎತ್ತದೇ ಕುಳಿತಿದ್ದರು.
ಇದನ್ನು ಬಿಗ್ ಮೆಸೇಜ್ ಎಂದು ಕರೆದಿರುವ ಕೇಜ್ರಿವಾಲ್, ದೇಶದ ರಾಜಧಾನಿಯಲ್ಲಿ ಎನ್ಪಿಆರ್ ಜಾರಿಗೆ ತರದಂತೆ ನಿರ್ಣಯ ಅಂಗೀಕರಿಸಲಾಗಿದೆ. ನಮ್ಮ ಸದನದ 61 ಶಾಸಕರ ಬಳಿ ಜನನ ಪ್ರಮಾಣ ಪತ್ರವಿಲ್ಲ. ಅವರನ್ನೂ ಡಿಟೆನ್ಷನ್ ಸೆಂಟರ್ಗೆ ಕಳುಹಿಸುತ್ತೀರಾ ಎಂದು ಕೇಂದ್ರ ಸರ್ಕಾರವನ್ನು ಕುಟುಕಿದ್ದಾರೆ. ಅಲ್ಲದೆ ಕೇಂದ್ರ ಸಚಿವರು ತಮ್ಮ ಜನನ ಪ್ರಮಾಣ ಪತ್ರಗಳನ್ನು ತೋರಿಸಲಿ ನೋಡೋಣ ಅಂತ ಸವಾಲ್ ಎಸೆದಿದ್ದಾರೆ.
masthmagaa.com
Contact Us for Advertisement