masthmagaa.com:
ರಮೇಶ್ ಜಾರಕಿಹೊಳಿ ಖಾಸಗಿ ವಿಡಿಯೋ ಬಹಿರಂಗವಾದ ಬಳಿಕ 6 ಸಚಿವರು ಕೋರ್ಟ್ಗೆ ಹೋಗಿ ಸ್ಟೇ ತರಲು ಕಾರಣವೇನು ಅನ್ನೋ ಬಗ್ಗೆ ನಾನಾ ರೀತಿಯ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣವೇನು ಅನ್ನೋದನ್ನ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ‘ರಮೇಶ್ ಜಾರಕಿಹೊಳಿ ವಿಡಿಯೋ ಪ್ರಕರಣದಲ್ಲಿ ಸರಿ-ತಪ್ಪು ಏನು ಅನ್ನೋದನ್ನ ಕೋರ್ಟ್ ಹೇಳುತ್ತೆ. ಅಷ್ಟರಲ್ಲಿ ಅವರ ತೇಜೋವಧೆ ಆಗಿಹೋಗಿರುತ್ತೆ. ರಾಜ್ಯದ ಜನರ ಎದುರು ಮಾನ ಮರ್ಯಾದೆ ಹೋದ್ಮೇಲೆ ಕೋರ್ಟ್ನಲ್ಲಿ ಫೈಟ್ ಮಾಡಿ ಏನ್ ಪ್ರಯೋಜನ. ಹೀಗಾಗಿ ಮೊದಲೇ ಕೋರ್ಟ್ಗೆ ಹೋಗಿ ಸಚಿವರು ರಕ್ಷಣೆ ಪಡೆದಿದ್ದಾರೆ. ಅದನ್ನ ಬಿಟ್ಟರೆ ಬೇರೆನೂ ಇಲ್ಲ ಅನ್ನೋದು ನನ್ನ ಅಭಿಪ್ರಾಯ. ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಇಂತಹ ವಿಚಾರಗಳನ್ನ ಪ್ರಸಾರ ಮಾಡ್ಬಾರ್ದು ಅಂತ ಕೋರ್ಟ್ ಹೇಳಿದೆ. ಸಾಕ್ಷ್ಯ ಸಿಕ್ಕರೆ ಟೆಲಿಕಾಸ್ಟ್ ಮಾಡ್ಬೋದು’ ಅಂತ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
-masthmagaa.com
Contact Us for Advertisement