masthmagaa.com:

ರಮೇಶ್ ಜಾರಕಿಹೊಳಿ ಖಾಸಗಿ ವಿಡಿಯೋ ಬಹಿರಂಗವಾದ ಬಳಿಕ 6 ಸಚಿವರು ಕೋರ್ಟ್​​ಗೆ ಹೋಗಿ ಸ್ಟೇ ತರಲು ಕಾರಣವೇನು ಅನ್ನೋ ಬಗ್ಗೆ ನಾನಾ ರೀತಿಯ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣವೇನು ಅನ್ನೋದನ್ನ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ‘ರಮೇಶ್ ಜಾರಕಿಹೊಳಿ ವಿಡಿಯೋ ಪ್ರಕರಣದಲ್ಲಿ ಸರಿ-ತಪ್ಪು ಏನು ಅನ್ನೋದನ್ನ ಕೋರ್ಟ್​ ಹೇಳುತ್ತೆ. ಅಷ್ಟರಲ್ಲಿ ಅವರ ತೇಜೋವಧೆ ಆಗಿಹೋಗಿರುತ್ತೆ. ರಾಜ್ಯದ ಜನರ ಎದುರು ಮಾನ ಮರ್ಯಾದೆ ಹೋದ್ಮೇಲೆ ಕೋರ್ಟ್​ನಲ್ಲಿ ಫೈಟ್ ಮಾಡಿ ಏನ್​ ಪ್ರಯೋಜನ. ಹೀಗಾಗಿ ಮೊದಲೇ ಕೋರ್ಟ್​ಗೆ ಹೋಗಿ ಸಚಿವರು ರಕ್ಷಣೆ ಪಡೆದಿದ್ದಾರೆ. ಅದನ್ನ ಬಿಟ್ಟರೆ ಬೇರೆನೂ ಇಲ್ಲ ಅನ್ನೋದು ನನ್ನ ಅಭಿಪ್ರಾಯ. ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಇಂತಹ ವಿಚಾರಗಳನ್ನ ಪ್ರಸಾರ ಮಾಡ್ಬಾರ್ದು ಅಂತ ಕೋರ್ಟ್​ ಹೇಳಿದೆ. ಸಾಕ್ಷ್ಯ ಸಿಕ್ಕರೆ ಟೆಲಿಕಾಸ್ಟ್ ಮಾಡ್ಬೋದು’ ಅಂತ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply