masthmagaa.com:
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರನ್ನು ಬದಲಿಸಲು ಕಾಂಗ್ರೆಸ್ ಮುಂದಾಗಿದೆ. ಅಧಿರ್ ರಂಜನ್ ಚೌಧರಿ ಬದಲು ಬೇರೆ ನಾಯಕರನ್ನು ನೇಮಿಸಲು ಪಕ್ಷ ಚಿಂತನೆ ನಡೆಸಿದೆ. ಆದ್ರೆ ರಾಹುಲ್ ಗಾಂಧಿ ನಾಯಕತ್ವವನ್ನು ವಹಿಸಿಕೊಳ್ಳಲ್ಲ ಅಂತ ಕೂಡ ಪಕ್ಷದ ಮೂಲಗಳು ತಿಳಿಸಿವೆ. ಹೀಗಾಗಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಗೆ ಬಹಿರಂಗ ಪತ್ರ ಬರೆದಿದ್ದ ನಾಯಕರಲ್ಲೇ ಯಾರದ್ರೂ ಒಬ್ಬರನ್ನು ಈ ಹುದ್ದೆಗೆ ಆಯ್ಕೆ ಮಾಡೋ ಸಾಧ್ಯತೆ ಇದೆ. ಶಶಿ ತರೂರ್, ಮನೀಶ್ ತಿವಾರಿ, ಗೌರವ್ ಗೊಗೊಯಿ, ರವನೀತ್ ಸಿಂಗ್ ಬಿಟ್ಟು, ಉತ್ತಮ್ ಕುಮಾರ್ ರೆಡ್ಡಿ ಈ ರೇಸ್ನಲ್ಲಿದ್ದಾರೆ.
-masthmagaa.com
Contact Us for Advertisement