masthmagaa.com:
ನಟ ನಟಿಯರು ಸದ್ಯ ದೇವಸ್ಥಾನಕ್ಕೆ ಹೋಗೋ ಟ್ರೆಂಡ್ ಶುರು ಆಗಿದೆ. ಬಾಲಿವುಡ್ನಲ್ಲಿ ಮಾತ್ರ ಅಲ್ಲದೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೂ ಈ ಟ್ರೆಂಡ್ ಫಾಲೋ ಆಗ್ತಾ ಇದೆ. ಸದ್ಯ ಡಿಂಪಲ್ ಕ್ವೀನ್ ರಚಿತಾ ರಾಮ್ ಮಂಗಳೂರು ಹೊರವಲಯದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿಸ್ಥಳಕ್ಕೆ ಭೇಟಿ ನೀಡಿದ್ದಾರೆ.
ರಚಿತಾ ರಾಮ್ ನಟನೆ ‘ಮ್ಯಾಟ್ನಿ’ ಹಾಗೂ ‘ಬ್ಯಾಡ್ ಮ್ಯಾನರ್ಸ್’ ರಿಲೀಸ್ಗೆ ರೆಡಿ ಆಗಿ ನಿಂತಿದೆ. ಈ ಚಿತ್ರಗಳ ಯಶಸ್ಸಿಗಾಗಿ ಪ್ರಾರ್ಥನೆ ಮಾಡೋಕೆ ಕೊರಗಜ್ಜನ ಸನ್ನಿಧಿಗೆ ರಚಿತಾ ಹೋಗಿದ್ದಾರೆ. ‘ನನ್ನ ಸ್ನೇಹಿತರೆಲ್ಲರೂ ಕೊರಗಜ್ಜ ದೈವದ ಬಗ್ಗೆ ಹೇಳಿದ್ದರು. ಹಾಗಾಗಿ ನನಗೂ ಇಲ್ಲಿಗೆ ಬರಬೇಕು ಅನ್ನಿಸಿತು ಹಾಗಾಗಿ ಬಂದೆ’ ಅಂತ ರಚಿತಾ ಮಾಧ್ಯಮದ ಜೊತೆ ಹೇಳಿದ್ದಾರೆ.
-masthmagaa.com
Contact Us for Advertisement