masthmagaa.com:
ಇಂಡಿಯಾ ಬ್ಲಾಕ್ನಲ್ಲಿ ಸೀಟು ಹಂಚಿಕೆ ವಿಚಾರವಾಗಿ ಭಿನ್ನಾಭಿಪ್ರಾಯಗಳು ಹೆಚ್ಚಾಗ್ತಿರೋದು ಕಂಡುಬರ್ತಿದೆ. ಇದೀಗ ಲೋಕಸಭಾ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ʻಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯವ್ರ ಸೇವೆಯಲ್ಲಿ ಬ್ಯುಸಿ ಆಗಿದ್ದಾರೆʼ ಅಂತ ಟೀಕಿಸಿದ್ದಾರೆ. ʻನಾವು ಯಾವ್ದೇ ರೀತಿ ಭಿಕ್ಷೆ ಬೇಡಿಲ್ಲ. ಮಮತಾ ಬ್ಯಾನರ್ಜಿ ಖುದ್ದು ಮೈತ್ರಿ ಬೇಕಂತ ಬಂದವ್ರು. ನಮಗೆ ಅವ್ರ ದಯೆ ಬೇಕಾಗಿಲ್ಲ. ಸ್ವಂತವಾಗಿ ಚುನಾವಣೆಯಲ್ಲಿ ಸ್ಪರ್ಧಿಸೋಕೆ ನಮಗಾಗುತ್ತೆ. ಇನ್ನು ಮಮತಾ ಬ್ಯಾನರ್ಜಿ ಅವ್ರಿಗೆ ಕೂಡ ನಮ್ಮೊಂದಿಗಿನ ಮೈತ್ರಿ ಬೇಕಾಗಿಲ್ಲ. ಯಾಕಂದ್ರೆ ಅವ್ರು ಪ್ರಧಾನಿ ಮೋದಿಯವ್ರ ಸೇವೆ ಮಾಡೋದ್ರಲ್ಲಿ ಬ್ಯುಸಿ ಇದ್ದಾರೆʼ ಅಂತ ಹೇಳಿಕೆ ನೀಡಿದ್ದಾರೆ. ಅಂದ್ಹಾಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ TMC ಪಶ್ಚಿಮ ಬಂಗಾಳದ ಎರಡು ಸೀಟ್ಗಳನ್ನ ಕಾಂಗ್ರೆಸ್ಗೆ ಆಫರ್ ಮಾಡಿರೋ ಬಗ್ಗೆ ರಿಯಾಕ್ಟ್ ಮಾಡೋ ವೇಳೆ ಅಧೀರ್ ರಂಜನ್ ಚೌಧರಿ ಈ ರೀತಿ ಹೇಳಿದ್ದಾರೆ.
-masthmagaa.com
Contact Us for Advertisement